ಸಿಂಧನೂರು: ಬಜೆಟ್ನಲ್ಲಿ ಜನಸಾಮಾನ್ಯರಿಗೆ ಉಪಯೋಗವಿರುವ ಯೋಜನೆಗಳ ಬಜೆಟ್ ಆಗಿದ್ದು, ಬಜೆಟ್ ಬಗ್ಗೆ ಟೀಕೆ ಮಾಡುತ್ತಿರುವ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಸಂವಿಧಾನ ಓದಿಲ್ಲ ಹಾಗಾಗಿ ಟೀಕೆ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ವ್ಯಂಗ್ಯವಾಡಿದರು.
ನಗರದ ಮಿನಿ ವಿಧಾನಸೌಧ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿ, ಮಾತನಾಡಿ, ಸಂವಿಧಾನ ಅರ್ಥಮಾಡಿಕೊಂಡು ಸಂಪೂರ್ಣವಾಗಿ ಓದಿಕೊಂಡು ಇರುವ ವ್ಯಕ್ತಿ ನಾನು ಬಗ್ಗೆ ಹಣ ಮಂಜೂರು ಮಾಡಬೇಕೆಂಬುದು ತಿಳಿದಿರುತ್ತದೆ. ಟೀಕೆ ಟಿಪ್ಪಣೆಗೆ ಎದುರುವ ವ್ಯಕ್ತಿ ನಾನಲ್ಲ, ಈ ಬಾರಿ ಬಜೆಟ್ನಲ್ಲಿ ಕೃಷಿಕರಿಗೆ ದಿನದಲಿತರಿಗೆ, ವಿದ್ಯಾರ್ಥಿನಿಯರಿಗೆ ಸ್ವಸಹಾಯ ಮಹಿಳಾ ಗುಂಪುಗಳಿಗೆ, ಆಶ್ರಯವಿಲ್ಲದವರಿಗೆ ನಿರಾಶ್ರಿತರಿಗೆ ಇನ್ನಿತರರಿಗೆ ಅನುಕೂಲವಾಗುವ ರೀತಿಯಲ್ಲಿ ಬಜೆಟ್ ಮಂಡಿಸಿದ್ದೇನೆ. ನನ್ನ ಬಜೆಟ್ನಲ್ಲಿ ಚುನಾವಣೆ ಗಿಮ್ಮಿಕ್ಕಿಲ್ಲ, ಇನ್ನು ಮುಂದೆ ನಮ್ಮದು ಹಸಿರು ಕ್ರಾಂತಿ ಮಾಡುವ ಗುರಿಯೊಂದೆ ನಮ್ಮದಾಗಿರುತ್ತದೆ ಎಂದರು.
Comments are closed.