ಕರ್ನಾಟಕ

ರಾಹುಲ್‌ಗೆ ದಲಿತ ಸಂಘಟನೆಗಳಿಂದ ಪ್ರತಿಭಟನೆ

Pinterest LinkedIn Tumblr


ಕೊಪ್ಪಳ: ಗಂಗಾವತಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಎದುರೇ ನಾನಾ ದಲಿತ‌ ಸಂಘಟನೆಗಳ ಮುಖಂಡರು ಕಪ್ಪು ಬಟ್ಟೆ ಪ್ರದರ್ಶಿಸಿದರು.

ಗಂಗಾವತಿಯಲ್ಲಿ ಜನಾಶೀರ್ವಾದ ಕಾರ್ಯಕ್ರಮ ನಡೆಯುವ ವೇಳೆ, ಸದಾಶಿವ ಆಯೋಗ‌ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ದಲಿತ ಮುಖಂಡರು ಕಪ್ಪು ಬಟ್ಟೆ ಪ್ರದರ್ಶಿದರು. ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಭಾಷಣ ಮುಗಿಸಿ ಕೆಳಗಿಳಿಯುವ ವೇಳೆಯಲ್ಲಿ ದಿಢೀರ್ ಕಪ್ಪು ಬಟ್ಟೆ ಪ್ರದರ್ಶಿಸಿದರು.

ತುರ್ತು ವಾಹನ ಸಂಚಾರಕ್ಕೂ ಅಡ್ಡಿ

ಸಿಂಧನೂರಿನಲ್ಲಿ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಇದೇ ವೇಳೆ ರೋಗಿಯನ್ನು ಕರೆದುಕೊಂಡು ಹೊರಟಿದ್ದ 108 ವಾಹನ‌ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿತ್ತು, ಸುಮಾರು 15 ನಿಮಿಷದವರೆಗೂ ಟ್ರಾಫಿಕ್‌ನಲ್ಲಿ‌ ಸಿಲುಕಿಕೊಂಡಿತ್ತು. ಪೊಲೀಸರು‌ ತುರ್ತು ವಾಹನ ಸಂಚಾರಕ್ಕೆ ದಾರಿ ಮಾಡಿಕೊಡಲು ವಿಫಲರಾದರು.

Comments are closed.