ಕರ್ನಾಟಕ

ಐದು ವರ್ಷ ಆಡಳಿತ ಪೂರೈಸಿದ್ದು ಪ್ರತಿಪಕ್ಷಗಳಿಗೆ ಹೊಟ್ಟೆಕಿಚ್ಚು: ಸಿದ್ದರಾಮಯ್ಯ

Pinterest LinkedIn Tumblr


ಹರಿಹರ: ಸಿಎಂ ಸಿದ್ದರಾಮಯ್ಯ ಮಠ, ದೇವಸ್ಥಾನ ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ತಮ್ಮ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ, ತೇಜೋವಧೆ ಮಾಡಲಾಗುತ್ತಿದೆ, ಐದು ವರ್ಷ ಆಡಳಿತ ಪೂರ್ಣಗೊಳಿಸಿರುವುದನ್ನು ನೋಡಿ ಹೊಟ್ಟೆಕಿಚ್ಚಿನಿಂದ ಈ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿ ನಡೆದ ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿದರು.

2006 ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿನ ಹಿನ್ನೆಲೆಯಲ್ಲಿ ಆಗಿನ ಮುಜರಾಯಿ ಸಚಿವರಾಗಿದ್ದ ವಿ.ಎಸ್.ಆಚಾರ್ಯ ನಿವೃತ್ತ ನ್ಯಾ. ರಾಮಾಜೋಯಿಸ್ ನೇತೃತ್ವದಲ್ಲಿ ಸಮಿತಿ ರಚಿಸಿ ಸಲಹೆ ಕೇಳಲು ಪ್ರಕಟಣೆ ನೀಡಲಾಗಿತ್ತು. ಅದೇ ಪ್ರಕಟಣೆಯ ನ್ನು ಯಥಾವತ್ತಾಗಿ ಆದಿಕಾರಿಗಳು ಪ್ರಕಟಿಸಿದ್ದಾರೆ. ಅಂದು ಪ್ರಕಟಣೆ ಹೊರಡಿಸಿದ ಅದೇ ಜನ ಇಂದು ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಈ ಕನಕ ಗುರುಪೀಠ ಕಟ್ಟಲು ನಾನೇ ಶ್ರಮಿಸಿದ್ದೇನೆ, ದೇವಸ್ಥಾನ, ಮಠಗಳನ್ನು ನಾನೇಕೆ ವಶಕ್ಕೆ ಪಡೆಯಲಿ, ಇವೆಲ್ಲಾ ಧಾರ್ಮಿಕ ಕೇಂದ್ರ ಗಳಾಗಿ ಬೆಳೆದು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಬಯಸುತ್ತೇನೆ, ಹೀಗಿರುವಾಗ ಅಪಪ್ರಚಾರ ಮಾಡಿ ಅಧಿಕಾರ ಹಿಡಿಯಲು ಹೊರಟವರ ಉದ್ದೇಶ ಈಡೇರುವುದಿಲ್ಲ ಎಂದರು.

ಜನಾಶೀರ್ವಾದ ಇರುವವರೆಗೂ ಅಪಪ್ರಚಾರ ಕ್ಕೆ ಹೆದರಲ್ಲ. ಎಸ್.ನಿಜಲಿಂಗಪ್ಪ, ದೇವರಾಜು ಅರಸು ನಂತರ ಐದು ವರ್ಷ ಆಡಳಿತ ನಡೆಸಿರುವುದು ವಿರೋಧಿಗಳಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಒಂದು ಕಪ್ಪು ಚುಕ್ಕೆ, ಹಗರಣ, ಭ್ರಷ್ಟಾಚಾರ ಇಲ್ಲದೆ ಸ್ವಚ್ಚ ಆಡಳಿತ ನೀಡಿದ್ದೇನೆ. ಯಾರೂ ಬೆರಳು ತೋರಿಸುವಂತಿಲ್ಲ. ಯಾರು ನನ್ನ ಮೇಲೆ ನಂಬಿಕೆಯಿಟ್ಟು ಆಶೀರ್ವಾದ ಮಾಡಿದ್ದರೋ ಅವರಿಗೆ ಗೌರವ ತರುವ ಕೆಲಸ ಮಾಡಿದ್ದೇನೆ . ಮುಂದೆಯೂ ‌ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದರು.

ಧರ್ಮವನ್ನು ಸ್ವಾರ್ಥ ಕ್ಕಾಗಿ ಬಳಸಿಕೊಳ್ಳುವುದು ಅಪರಾಧ, ಇಂತವರು ಸಮಾಜದಲ್ಲಿ ಇರಬಾರದು. ಧರ್ಮದ ಬಗ್ಗೆ ಅಪವ್ಯಾಖ್ಯಾನ ಮಾಡಿ ಬೆಂಕಿ ಹಚ್ಚುವವರ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಸಿದ್ದರಾಮಯ್ಯ ತಿಳಿಸಿದರು.

ನನ್ನನ್ನು ಡೊಳ್ಳಿನ ರೀತಿ ಎರಡು ಕಡೆಯಿಂದಲೂ ಬಾರಿಸುತ್ತಾರೆ. ಮೊದಲು ಅಹಿಂದ ಸರಕಾರ ಅಂದ್ರು, ಈಗ ಅಹಿಂದ ವರ್ಗಕ್ಕೆ ಎನೂ ಮಾಡಿಲ್ಲ ಅಂತಾರೆ. ಕೆಲ ಅಹಿಂದಧವರು ನಮಗೆ ಏನು ಮಾಡಿಲ್ಲ ಅಪಪ್ರಚಾರ ಮಾಡ್ರಾರೆ. ನಾನು ಇದಕ್ಕೆಲ್ಲಾ ಹೆದರಲ್ಲ. ಬಡವರು, ಶೋಷಿತರು, ಅವಕಾಶವಂಚಿತರು, ಜನಸಾಮಾನ್ಯರಿಗೆ ಅವಕಾಶ, ಸೌಲಭ್ಯ ದೊರೆಯಬೇಕು. ಬಶವಣ್ಣ, ಕನಕದಾಸರು ಕನಸಿದಂತೆ ಸಮ ನಿರ್ಮಾಣ ಆಗಬೇಕು ಎಂದು ಬಯಸಿದವನು ನಾನು ಸಿದ್ದರಾಮಯ್ಯ ಹೇಳಿದರು.

Comments are closed.