ತುಮಕೂರು: ಅಪ್ಪನ ಮದ್ಯಪಾನ ಚಟದಿಂದ ಬೇಸತ್ತ ವಿದ್ಯಾರ್ಥಿಯೊಬ್ಬ ಮದ್ಯಪಾನದ ದುಷ್ಪರಿಣಾಮಗಳಿಗೆ ಅಂತ್ಯ ಹಾಡಲು ತಿಪಟೂರು ತಾಲೂಕು ಕಚೇರಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆಗೆ ಇಳಿದು ಗಮನ ಸೆಳೆದಿದ್ದಾನೆ.
ಆಲ್ಬೂರು ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎ.ಬಿ.ಲೋಕೇಶ್ ಅವರ ತಂದೆ ಬೊಮ್ಮೇಗೌಡ ಮದ್ಯ ವ್ಯಸನಿಯಾಗಿದ್ದು ಮನೆಯಲ್ಲಿ ಎದುರಾಗಿರೋ ಆರ್ಥಿಕ ಹಾಗೂ ಕೌಟುಂಬಿಕ ಸಮಸ್ಯೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾನೆ.
ಇದಕ್ಕೆಲ್ಲಾ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರೋ ಮದ್ಯ ಮಾರಾಟವೇ ಕಾರಣ ಎಂಬುವುದು ಲೋಕೇಶ್ ಆರೋಪವಾಗಿದೆ. ಆದ್ದರಿಂದ ಕೂಡಲೇ ಮದ್ಯದಂಗಡಿಯನ್ನ ಮುಚ್ಚಬೇಕು ಅಂತಾ ಒತ್ತಾಯಿಸಿದ್ದಾನೆ.
ವಿದ್ಯಾರ್ಥಿಯ ಕಾಳಜಿಯನ್ನ ಕಂಡ ತಹಸೀಲ್ದಾರ್ ಮಂಜುನಾಥ್ ವಿದ್ಯಾರ್ಥಿಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
Comments are closed.