ಬೆಂಗಳೂರು: ಪ್ರಧಾನಿ ಮೋದಿ ಅವರ ಬೆಂಗಳೂರು ರ್ಯಾಲಿ ಕುರಿತಂತೆ ಟೀಕೆ ಮಾಡಿರುವ ನಟಿ ರಮ್ಯಾ, ವಿವಾದಾತ್ಮಕ ಟ್ವೀಟ್ ಮಾಡಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಪ್ರಧಾನಿ ಮೋದಿ ಭಾಷಣದ ಕುರಿತಂತೆ ಕಾಂಗ್ರೆಸ್ ಮುಖಂಡರಾದ ಜಿ ಪರಮೇಶ್ವರ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ಬೆನ್ನಲ್ಲೇ ಟ್ವೀಟ್ ಮಾಡಿರುವ ರಮ್ಯಾ, ಬೆಲೆ ಕುಸಿತ ನೀವು ನಶೆಯಲ್ಲಿದ್ದ ವೇಳೆ ನಡೆದಿದ್ದಾ ಎಂದು ಟೀಕಿಸುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಬೆಂಗಳೂರು ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ರೈತ ಬೆಳೆಗಳ ಬೆಲೆ ಕುಸಿತ ಸಂಬಂಧ, ರೈತರ ಸಮಸ್ಯೆಗಳಿಗೇ ನನ್ನ ಮೊದಲ ಆದ್ಯತೆಯಾಗಿದ್ದು, ಟಾಪ್ ಪ್ರಿಯಾರಿಟಿ (ಟೊಮಾಟೋ, ಆನಿಯನ್ (ಈರುಳ್ಳಿ), ಪೊಟ್ಯಾಟೋ(ಆಲೂಗೆಡ್ಡೆ) ಎಂದು ಹೇಳಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ರಮ್ಯಾ, ಬೆಲೆ ಕುಸಿತ ನೀವು ನಶೆಯಲ್ಲಿದ್ದ ವೇಳೆ ನಡೆದಿದ್ದಾ ಎಂದು ಹೇಳಿದ್ದಾರೆ.
ನಟಿ ರಮ್ಯಾ ವಿರುದ್ಧ ಬಿಜೆಪಿ ವ್ಯಾಪಕ ಆಕ್ರೋಶ
ಇನ್ನು ಪ್ರಧಾನಿ ಮೋದಿ ಕುರಿತು ನಟಿ ರಮ್ಯಾ ಮಾಡಿದ್ದ ಟ್ವೀಟ್ ಬಿಜೆಪಿಯಿಂದ ವ್ಯಾಪಕ ಆಕ್ರೋಶವ್ಯಕ್ತವಾಗುತ್ತಿದ್ದು, ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ರಮ್ಯಾ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್, ಸತತ ಸೋಲಿನಿಂದ ತಲೆಕೆಟ್ಟು, ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತದೆ. ರಮ್ಯಾ ಹೆಸರಲ್ಲೇ ‘ರಮ್’ ಇರುವುದರಿಂದ ಟ್ವೀಟ್ ಮಾಡುವಾಗಲೂ ಕುಡಿದಿರುತ್ತಾರೆ ಎಂದೆನಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Is this what happens when you’re on POT? pic.twitter.com/fwSATJoQoP
— Divya Spandana/Ramya (@divyaspandana) February 4, 2018
ಸತತ ಸೋಲಿಗೆ ತಲೆಕೆಟ್ಟು ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತದೆ. pic.twitter.com/nk3Y7bXdkd
— Shilpa Ganesh (@ShilpaaGanesh) February 4, 2018
Ramya has a Rum in her name…looks like she is always drunk when she tweets? pic.twitter.com/CyfUyw3fHW
— Shilpa Ganesh (@ShilpaaGanesh) February 4, 2018
Comments are closed.