ರಾಷ್ಟ್ರೀಯ

ರಾಜ್ಯಸಭೆಯಲ್ಲಿ ಅಮಿತ್‌ ಶಾ ಮೊದಲ ಭಾಷಣ: ನಿರುದ್ಯೋಗಕ್ಕಿಂತ ಪಕೋಡ ಮಾರುವುದೇ ಲೇಸು

Pinterest LinkedIn Tumblr


ಹೊಸದಿಲ್ಲಿ: ಪಕೋಡ ಮಾರಾಟ ಮಾಡುವ ವಿಷಯ ಈಗ ರಾಷ್ಟ್ರ ವ್ಯಾಪಿಯಲ್ಲಿ ಚರ್ಚೆಗೆ ಕಾರಣವಾಗಿದೆ. ರಾಜ್ಯಸಭೆಯಲ್ಲೂ ಈಗ ಪಕೋಡ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಅಮಿತ್‌ ಶಾ, ಪಕೋಡ ವಿಷಯದ ಪ್ರಸ್ತಾವ ಮಾಡಿದರು.

ನಿರುದ್ಯೋಗಿ ಇರುವುದಕ್ಕಿಂತ ಕಾರ್ಮಿಕನಾಗಿ ಅಥವಾ ಪಕೋಡಾ ಮಾರಾಟ ಮಾಡಿ ಜೀವನ ಸಾಗಿಸುವುದು ಲೇಸು. ಪಕೋಡಾ ಮಾರಾಟ ಮಾಡುವುದು ನಾಚಿಕೆಗೇಡಿನ ಕೆಲಸ ಅಲ್ಲ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

ನಿರುದ್ಯೋಗ ವಿಷಯದಲ್ಲಿ ಕಾಂಗ್ರೆಸ್‌ ಯಾವುದೇ ಯೋಜನೆ ರೂಪಿಸಿಲ್ಲ. 55 ವರ್ಷದಿಂದ ಯಾವುದೇ ಕಾರ್ಯ ಮಾಡದ ಕಾಂಗ್ರೆಸ್‌ ಈಗ ಆಕ್ಷೇಪ ಮಾಡುತ್ತಿರುವುದು ಸರಿಯಲ್ಲ. ನಾವು ಉದ್ಯೋಗ ಸೃಷ್ಟಿಗೆ ಹಲವಾರು ಯೋಜನೆ ರೂಪಿಸುತ್ತಿದ್ದೇವೆ ಎಂದರು.

ಈ ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರ, ಹಗರಣಗಳಲ್ಲಿಯೇ ಮುಳುಗಿತ್ತು ಎಂದು ಅಮಿತ್‌ ಶಾ ಲೇವಡಿ ಮಾಡಿದರು.

ಜಿಎಸ್‌ಟಿ, ಕಾಶ್ಮೀರ ಹಾಗೂ ಇನ್ನಿತರ ವಿಷಯಗಳಲ್ಲಿ ಕೇಂದ್ರ ಸರಕಾರ ಅತ್ಯಂತ ಪ್ರಬುದ್ಧ ರೀತಿಯಲ್ಲಿ ಆಡಳಿತ ನಡೆಸಿದೆ ಎಂದು ಅಮಿತ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನರೇಂದ್ರ ಮೋದಿ ಮೊದಲ ಬಾರಿಗೆ ಪಕೋಡ ವಿಷಯವನ್ನು ಪ್ರಸ್ತಾವಿಸಿದ್ದರು.

ಒಬ್ಬ ವ್ಯಕ್ತಿ ಪಕೋಡ ಮಾರಿ ದಿನಕ್ಕೆ 200 ರೂಪಾಯಿ ಸಂಪಾದಿಸಿದರೆ ಅದನ್ನು ಉದ್ಯೋಗ ಎನ್ನಬೇಕೇ ಬೇಡವೇ ಎಂದು ಮೋದಿ ತಿಳಿಸಿದ್ದರು.

ಮೋದಿ ಈ ಹೇಳಿಕೆಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಉದ್ಯೋಗ ಸೃಷ್ಟಿ ಮಾಡಬೇಕಾದರೆ ಪ್ರಧಾನಿ ಮೋದಿ, ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಟೀಕಿಸಿದ್ದರು.

Comments are closed.