ಕರ್ನಾಟಕ

ಸಚಿವ ಆಂಜನೇಯ ಮನೆ ಮುಂದೆ ಮಹಿಳೆ ಆತ್ಮಹತ್ಯೆಗೆ ಯತ್ನ

Pinterest LinkedIn Tumblr


ಚಿತ್ರದುರ್ಗ: ಬ್ಯಾಂಕ್ ನಲ್ಲಿನ ಸಾಲ ತೀರಿಸಲಾಗದೆ ಸಚಿವರ ಸಹಾಯಕ್ಕಾಗಿ ಬಂದಿದ್ದ ಮಹಿಳೆ ಸಹಾಯ ಯಾಚಿಸಿ ಅಂತಿಮವಾಗಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ನಿವಾಸದ ಎದುರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಚಿತ್ರದುರ್ಗದ ಹೆಚ್.ಆಂಜನೇಯ ನಿವಾಸದ ಬಳಿ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗ್ರಾಮದ ಗಾಯತ್ರಿ ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಪತಿ ರಾಜಪ್ಪ ಸಾಲ ಮಾಡಿದ್ದರಿಂದ ಬ್ಯಾಂಕ್ ಸಿಬ್ಬಂದಿ ಪದೇ ಪದೇ ನೋಟಿಸ್ ನೀಡುತ್ತಿದ್ದರು. ರಾಜಪ್ಪ ಎಸ್.ಬಿ.ಐ ಬ್ಯಾಂಕ್‌ನಲ್ಲಿ ಆರು ಲಕ್ಷ ಸಾಲ ಮಾಡಿದ್ದರು. ಹೀಗಾಗಿ ಸಚಿವ ಆಂಜನೇಯರನ್ನು ಸಂಪರ್ಕಿಸಿ ಮಹಿಳೆಗೆ ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೂ ಮಹಿಳೆ ಮನನೊಂದು, ಸಚಿವರ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಕೆಲವರು ಕೂಡಲೇ ಅವರನ್ನು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.

-ಉದಯವಾಣಿ

Comments are closed.