ಕರ್ನಾಟಕ

ದೇವೇಗೌಡರ ವಿರುದ್ಧ ಪೋಸ್ಟ್‌: ಎಸ್ಪಿಗೆ ದೂರು

Pinterest LinkedIn Tumblr


ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಅಂಥಹ ವ್ಯಕ್ತಿಗಳನ್ನು ಬಂಧಿಸುವಂತೆ ಜೆಡಿಎಸ್‌ ಕಾರ್ಯಕರ್ತರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಸತೀಶ್ ಕುಮಾರ್ ಮೋದಿ ಮತ್ತು ಭರತ್ ಗೌಡ ವಿರುದ್ದ ಎಸ್ಪಿಗೆ ದೂರು ನೀಡಿರುವ ಜೆಡಿಎಸ್ ಕಾರ್ಯಕರ್ತರು, ಯಾರ ವಿರುದ್ಧವೂ ವೈಯುಕ್ತಿಕ ದ್ವೇಷ ಇಟ್ಟುಕೊಂಡು ಕೀಳುಮಟ್ಟದ ಪದಬಳಕೆ‌ ಮಾಡಬಾರದು. ಸತೀಶ್ ಕುಮಾರ್ ಮೋದಿ ಎಂಬವರು ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಹಿಂದುತ್ವದ ಬಗ್ಗೆ ಹೆಮ್ಮೆ ಪಡುವ ಪೋಸ್ಟರ್ ಹಾಕಿಕೊಂಡಿದ್ದಾರೆ. ಆದರೆ ಇನ್ನೊಬ್ಬರ ಬಗ್ಗೆ ಕೀಳು ಮಟ್ಟದ ಹೊಲಸು ಪದ ಪ್ರಯೋಗ ಹಿಂದುತ್ವದಲ್ಲಿ‌ ಇಲ್ಲ. ಆದ್ದರಿಂದ ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ವಹಿಸಬೇಕು ಎಂದು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

Comments are closed.