ಕರ್ನಾಟಕ

ಚುನಾವಣೆಯಲ್ಲಿ ಸ್ಪರ್ಧೆಗೆ ಆಗ್ರಹಿಸಿ ವಿಷ ಸೇವನೆ ಯತ್ನ

Pinterest LinkedIn Tumblr


ಮಂಡ್ಯ: ಸಮಾಜಸೇವಕ ಬಿ.ರೇವಣ್ಣ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಒತ್ತಾಯಿಸಿ ಅಭಿಮಾನಿಯೊಬ್ಬ ವಿಷ ಕುಡಿಯಲು ಯತ್ನಿಸಿದ ಘಟನೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.

ತಿಮ್ಮನಕೊಪ್ಪಲು ಗ್ರಾಮದ ರೇವಣ್ಣ ಅಭಿಮಾನಿಯಾಗಿರುವ ಯಶ್ವಂತ್ ಅವರು ರೇವಣ್ಣ ಅವರ ಎದುರೇ ವಿಷ ಕುಡಿಯಲು ಯತ್ನಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಸಮಾಜಸೇವೆಯಲ್ಲಿಯೇ ಮುಂದುವರಿಯುತ್ತೇನೆ ಎಂದು ರೇವಣ್ಣ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ರೇವಣ್ಣ ಅವರು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಾಂಡವಪುರ ಪಟ್ಟಣದ ಮಹಾತ್ಮಗಾಂಧಿ ಬಡಾವಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಿ.ರೇವಣ್ಣ ಕಾರ್ಯಕ್ರಮ ಮುಗಿಸಿ ವಾಪಸಾಗುವಾಗ ಅಡ್ಡಗಟ್ಟಿದ ಅಭಿಮಾನಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿ ಅಂಗಲಾಚಿ ಬೇಡಿಕೊಂಡರು. ಅಭಿಮಾನಿಗಳು ಗೋಳಾಟವನ್ನು ನೋಡಿ ರೇವಣ್ಣ ಅವರು ಕಣ್ಣೀರು ಹಾಕಿದರು.

Comments are closed.