ಕರ್ನಾಟಕ

ಅಯ್ಯೋ…ವೇದಿಕೆಯಲ್ಲೇ ಡಿವಿಎಸ್ ಹೇಳಿದ ಆರೋಪ ಕೇಳಿ BSY ಕಂಗಾಲು!

Pinterest LinkedIn Tumblr


ಮೈಸೂರು; ಕೇಂದ್ರ ಸಾಂಖ್ಯಿಕ ಖಾತೆ ಸಚಿವ ಡಿವಿ ಸದಾನಂದ ಗೌಡ ಅವರು ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ, ಬಿಎಸ್ ಯಡಿಯೂರಪ್ಪನವರ ಅವಧಿಯಲ್ಲಿ 3.5 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಹೇಳುವ ಮೂಲಕ ವೇದಿಕೆಯಲ್ಲಿಯೇ ಇದ್ದ ಬಿಎಸ್ ವೈ ತಬ್ಬಿಬ್ಬಾದ ಘಟನೆ ನಡೆದಿದೆ!

ಮೈಸೂರಿನ ಸುತ್ತೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಡಿವಿ ಸದಾನಂದ ಗೌಡರು ಮಾತನಾಡುತ್ತಿದ್ದ ವೇಳೆ ಯಡಿಯೂರಪ್ಪ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ ಸಿಕ್ಕಿದೆ. ಇಂತಹ ಸಿಎಂ ನಮಗೆ ಬೇಕಾ, ಬೇಕಾ ಹೇಳಿ ಎಂದು ನೆರೆದಿದ್ದವರನ್ನು ಪ್ರಶ್ನಿಸಿದರು!

ತಮ್ಮ ಭಾಷಣದಲ್ಲಾದ ತಪ್ಪಿನ ಅರಿವಾಗದೇ ಸದಾನಂದ ಗೌಡರು ಸುಮಾರು 5 ನಿಮಿಷಗಳ ಕಾಲ ಭಾಷಣ ಮುಂದುವರಿಸಿದ್ದರು. ಆವೇಶದಿಂದ ಸದಾನಂದ ಗೌಡರು ಮಾತನ್ನಾಡುತ್ತಿದ್ದುದರಿಂದ ತಪ್ಪಾಗಿದೆ ಎಂದು ಹೇಳುವ ಸ್ಥಿತಿಯಲ್ಲೂ ಯಡಿಯೂರಪ್ಪನವರು ಇರಲಿಲ್ಲ.

ಕೊನೆಗೂ ಭಾಗ್ಯಗಳ ಹೆಸರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಭಾಷಣ ಮುಗಿಸಿ ಡಿವಿಎಸ್ ವೇದಿಕೆಯಿಂದ ನಿರ್ಗಮಿಸಿದ್ದರು.

-ಉದಯವಾಣಿ

Comments are closed.