ಕರ್ನಾಟಕ

ಮುಸುರೆ ಚೆಲ್ಲುವ ವಿಷಯಕ್ಕೆ ಜಗಳ, ವ್ಯಕ್ತಿಯ ಕೊಲೆ

Pinterest LinkedIn Tumblr


ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

ಜಿಲ್ಲೆಯ ಬಾದಾಮಿ ತಾಲೂಕಿನ ಕಟಗಿನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಜ. 19ರ ರಾತ್ರಿ ಥಾಮಸಪ್ಪ ಗೌಡರ್​, ಚೌರಪ್ಪ ಹಾಗೂ ಮೂಶೆಪ್ಪ ಗೌಡರ್​ ಎಂಬುವರ ಮಧ್ಯೆ ಮುಸುರೆ ಚೆಲ್ಲುವ ವಿಷಯಕ್ಕೆ ಜಗಳ ಪ್ರಾರಂಭವಾಗಿದೆ. ಈ ವೇಳೆ ಮೂಶೆಪ್ಪ ಗೌಡರ್​ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ.

ಮೂಶೆಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಗುಳೇದಗುಡ್ಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.