ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಫಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಶದಲ್ಲಿರುವ ರವಿ ಬೆಳಗೆರೆ ಇದೆಲ್ಲದರ ನಡುವೆಯೂ ಬರವಣಿಗೆ ಮುಂದುವರಿಸಿದ್ದಾರೆ.
ನಿನ್ನೆ ಊಟ ಮುಗಿಸಿ ತಡರಾತ್ರಿವರೆಗೆ ಎದ್ದು ಕೂತಿದ್ದ ರವಿ ಬೆಳಗೆರೆ ಪೊಲೀಸರ ಬಳಿ ಕಾಗದ ಮತ್ತು ಪೆನ್ನು ಪಡೆದು ತಮ್ಮ ದಿನಚರಿ ಬರೆದಿದ್ದಾರೆ. ಅಷ್ಟೇ ಅಲ್ಲ, ಇಂದೂ ಬೆಳಿಗ್ಗೆ 2 ಗಂಟೆ ಮುಂಚಿತವಾಗಿ ಎದ್ದ ರವಿ ಬೆಳಗೆರೆ ತಮಗೆ ತೋಚಿದ್ದನ್ನು ಗೀಚಿದ್ದಾರೆ.
ರವಿ ಬೆಳಗೆರೆ ಬಂಧನದ ನಂತರವೂ ಹಾಯ್ ಬೆಂಗಳೂರು ಪತ್ರಿಕೆ ಪ್ರಕಟಣೆ ನಿಲ್ಲದು ಎಂದು ಪತ್ರಿಕೆ ಮೂಲಗಳು ಹೇಳಿವೆ. ಈ ಹಿನ್ನಲೆಯಲ್ಲಿ ತಮ್ಮ ಪತ್ರಿಕೆ ಕೆಲಸವನ್ನು ಪೊಲೀಸರ ವಶದಲ್ಲೇ ರವಿ ಬೆಳಗೆರೆ ಮಾಡಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ.
Comments are closed.