ಕರ್ನಾಟಕ

ರವಿ ಬೆಳಗೆರೆಗೆ ಭೂಗತ ನಂಟಿದೆ; ನನ್ನ ಜೀವಕ್ಕೆ ಅಪಾಯವಿದೆ

Pinterest LinkedIn Tumblr


ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ, ರವಿ ಬೆಳಗೆರೆಗೆ ಈಗಾಗಲೇ ಡಿಸೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದರೆ ರವಿ ಬೆಳಗೆರೆ ಜೈಲಿನ ಒಳಗಡೆ ಇದ್ದರೂ ನನ್ನ ಜೀವಕ್ಕೆ ಅಪಾಯವಿದೆ. ಪತ್ರಕರ್ತ ರವಿ ಬೆಳಗೆರೆಗೆ ಭೂಗತ ನಂಟು ಇದೆ, ಅದು ಅಲ್ಲದೇ, 250 ಕೋಟಿ ರೂಪಾಯಿಗಳ ಒಡೆಯ ಅವರು ಎಂದು ಸುನಿಲ್ ಹೆಗ್ಗರವಳ್ಳಿ ಹೇಳಿದ್ದಾರೆ. ರವಿ ಬೆಳಗೆರೆ ಜೈಲಲ್ಲಿ ಇದ್ದರೂ ನನಗೆ ಅಪಾಯವಿದೆ. ನನಗೆ ರಕ್ಷಣೆ ಬೇಕು, ನನ್ನ ಕುಟುಂಬಸ್ಥರಿಗೂ ರಕ್ಷಣೆ ಬೇಕು ಎಂದು ಸುನೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಭೇಟಿಗೂ ಮುನ್ನ ಸುನೀಲ್ ಹೇಳಿದ್ದಾರೆ.

 

ನನಗೆ ವಯಸ್ಸಾದ ತಂದೆ-ತಾಯಿ ಇದ್ದಾರೆ, ರವಿ ಬೆಳಗೆರೆ ಜೈಲಿನ ಒಳಗಡೆ ಇದ್ದರೂ ನನ್ನ ಜೀವಕ್ಕೆ ಅಪಾಯವಿದೆ. 4-5 ಗನ್ ಮ್ಯಾನ್ ಗಳನ್ನು ಇಟ್ಟು ಕೊಳ್ಳುವ ಸಾಮರ್ಥ್ಯ ನನಗಿಲ್ಲ’ ಹೀಗಾಗಿ ರಕ್ಷಣೆ ಒದಗಿಸುವಂತೆ ಸಿಎಂಗೆ ಮನವಿ ಮಾಡಲಿದ್ದಾರಂತೆ ಸುನೀಲ್.

Comments are closed.