ಕರ್ನಾಟಕ

ಕುಖ್ಯಾತ ದರೋಡೆಕೋರನ ಕಾಲಿಗೆ ಪೊಲೀಸ್‌ ಗುಂಡು

Pinterest LinkedIn Tumblr


ಕಲಬುರಗಿ: ನಗರದ ಹೊರವಲಯದ ರಿಂಗ್‌ ರಸ್ತೆಯಲ್ಲಿ ಬುಧವಾರ ಕುಖ್ಯಾತ ದರೋಡೆಕೋರನೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ.

ಬಿದ್ದಾಪುರ ಕ್ರಾಸ್‌ ಬಳಿ ಕಳೆದ ರಾತ್ರಿ ಬಾರ್‌ ಮ್ಯಾನೇಜರ್‌ವೊಬ್ಬರನ್ನು ಅಡ್ಡಗಟ್ಟಿ ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಯ ಇರ್ಫಾನ್‌ (25) ನ ಬಂಧನಕ್ಕೆ ಪೊಲೀಸರು ತೆರಳಿದ್ದರು.

ಪೊಲೀಸರು ವಶಕ್ಕೆ ಪಡೆಯಲು ಮುಂದಾಗದಾಗ ಇಟ್ಟಿಗೆ ಮತ್ತು ಕಲ್ಲುಗಳಿಂದ ಇರ್ಫಾನ್‌ ದಾಳಿ ಮಾಡಿದ್ದು, ಆತ್ಮರಕ್ಷಣೆಗಾಗಿ ಪಿಎಸ್‌ಐ ವಾಹಿದ್‌ ಕೋತ್ವಾಲ್‌ ಅವರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.

ಚಕಮಕಿಯಲ್ಲಿ ಪಿಎಸ್‌ಐ ವಾಹಿದ್‌, ಪೇದೆಗಳಾದ ಕೇಶವ ಮತ್ತು ಬಾದ್‌ಶಾಗೆ ಸಣ್ಣ ಪುಟ್ಟಗಾಯಗಳಾಗಿವೆ.

ಘಟನೆಗೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಉದಯವಾಣಿ

Comments are closed.