ಕರ್ನಾಟಕ

ಖಾಸಗಿ ವೈದ್ಯರು ತಕ್ಷಣ ಮುಷ್ಕರ ನಿಲ್ಲಿಸಬೇಕು; ಹೈಕೋರ್ಟ್ ಮನವಿ

Pinterest LinkedIn Tumblr


ಬೆಂಗಳೂರು: ಜನಸಾಮಾನ್ಯರ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಮುಷ್ಕರ ಮುಂದುವರಿಸಬೇಡಿ, ಹೀಗಾಗಿ ಖಾಸಗಿ ವೈದ್ಯರು ತಕ್ಷಣವೇ ಮುಷ್ಕರ ನಿಲ್ಲಿಸಬೇಕೆಂದು ಹೈಕೋರ್ಟ್ ಗುರುವಾರ ಮನವಿ ಮಾಡಿಕೊಂಡಿದೆ.

ಖಾಸಗಿ ವೈದ್ಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಅಂತ್ಯಗೊಳಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಎರಡು ಪಿಐಎಲ್ ಹೈಕೋರ್ಟ್ ಗೆ ಸಲ್ಲಿಕೆಯಾಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ತಕ್ಷಣ ಮುಷ್ಕರ ನಿಲ್ಲಿಸಬೇಕೆಂದು ಮನವಿ ಮಾಡಿದ್ದು, ಸಿಎಂ ಜತೆ ಸಭೆ ನಂತರ ನಿರ್ಧಾರ ಕೈಗೊಳ್ಳಿ ಎಂದು ಸಲಹೆ ನೀಡಿದೆ.

ನೀವು ಅಕ್ಷರಸ್ಥರು, ತಿಳಿದವರು ಮಸೂದೆ ಮಂಡನೆಯಾಗುವ ಮೊದಲೇ ಈ ರೀತಿ ಪ್ರತಿಭಟನೆ ನಡೆಸುವುದು ಸರಿಯೇ ಎಂದು ಹೈಕೋರ್ಟ್ ವಿಭಾಗೀಯ ಪೀಠದ ನ್ಯಾ.ಎಚ್ ಜಿ ರಮೇಶ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

-ಉದಯವಾಣಿ

Comments are closed.