ಕರ್ನಾಟಕ

ತುಮಕೂರಿನಲ್ಲಿ ಬಿಜೆಪಿ ರಥದತ್ತ ಉದ್ರಿಕ್ತರ ಕಲ್ಲು!

Pinterest LinkedIn Tumblr


ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ನವ ಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆ’ ಯ ರಥ ಶುಕ್ರವಾರ ಸಂಚರಿಸುತ್ತಿದ್ದು,
ಬಾಣಸಂದ್ರದಲ್ಲಿ ರಥದತ್ತ ಕಲ್ಲು ತೂರಾಟ ನಡೆಸಲಾಗಿದೆ.

ವರದಿಯಾದಂತೆ ಯಡಿಯೂರಪ್ಪ ಅವರಿದ್ದ ಕಾರನ್ನು ತುರುವೇಕೆರೆಯ ಬಾಣಸಂದ್ರದಲ್ಲಿ ನಿಲ್ಲಿಸದೇ ಇದ್ದ ಕಾರಣಕ್ಕೆ ಉದ್ರಿಕ್ತ ಬಂಡಾಯ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ಅತೃಪ್ತರಿಗೆ ಜೆಡಿಎಸ್‌ ಕಾರ್ಯಕರ್ತರು ಸಾಥ್‌ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿಯಿಂದ ನಾಲ್ಕು ದಿನಗಳ ಹಿಂದೆ ಉಚ್ಛಾಟನೆಯಾಗಿದ್ದ ಚೌಧರಿ ನಾಗೇಶ್‌ ಎಂಬ ಮುಖಂಡನ ಬೆಂಬಲಿಗರು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ತೂರಿದ ಕಲ್ಲು ಬಿಜೆಪಿ ರಥಕ್ಕೆ ತಗುಲಿಲ್ಲ, ಬದಲಾಗಿ ಪಕ್ಕದಲ್ಲಿದ್ದ ಕಾರಿಗೆ ಬಿದ್ದು ಗಾಜು ಪುಡಿಯಾಗಿದೆ.

ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದ್ದು, ಕೆಲವರನ್ನುವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

-ಉದಯವಾಣಿ

Comments are closed.