ಕರ್ನಾಟಕ

ತಾಕತ್‌ ಇದ್ರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಿ!

Pinterest LinkedIn Tumblr


ತುಮಕೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನು ಸೇವಿಸಿ ಧರ್ಮಸœಳ ದೇಗುಲಕ್ಕೆ ತೆರಳಿದ್ದ ವಿಚಾರ ಪ್ರಸ್ಥಾವಿಸಿ ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಬಹಿರಂಗ ಸವಾಲು ಹಾಕಿದ್ದಾರೆ.

‘ಮುಖ್ಯಮಂತ್ರಿಗಳು ತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಪ್ರವೇಶ ಮಾಡಲಿ’ ಎಂದು ಶಿವಣ್ಣ ಸವಾಲು ಹಾಕಿದರು.

‘ಸಿದ್ದರಾಮಯ್ಯ ಅವರಿಗೆ ಅಹಂಕಾರ, ಹೀಗಾಗಿ ಇಂತಹ ವರ್ತನೆ ತೋರುತ್ತಿದ್ದಾರೆ’ ಎಂದು ಕಿಡಿ ಕಾರಿದರು.

ಸಿದ್ದರಾಮಯ್ಯ ಅವರು ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದ ವೇಳೆ ಮೀನಿನ ಊಟ ಮಾಡಿ ಧರ್ಮಸ್ಥಳ ದೇವಾಲಯದೊಳಗೆ ಪ್ರವೇಶ ಮಾಡಿರುವ ವಿಚಾರ ಫೋಟೋ ಸಹಿತ ಮಾಧ್ಯಮಗಳಲ್ಲಿ , ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಟೀಕೆಗೆ ಒಳಗಾಗಿತ್ತು.

-ಉದಯವಾಣಿ

Comments are closed.