ಕರ್ನಾಟಕ

ಕರೆಂಟ್ ಹೋಗುವ 10 ನಿಮಿಷ ಮೊದಲೇ ನಿಮ್ಮ ಮೊಬೈಲ್ ಗೆ ಸಂದೇಶ

Pinterest LinkedIn Tumblr


ಬೆಂಗಳೂರು (ಫೆ.02): ಇನ್ಮೇಲೆ ಕರೆಂಟ್ ಹೋಗುತ್ತೆ ಅಂದ್ರೆ,ಹತ್ತು ನಿಮಿಷ ಮುಂಚೆ ನಿಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತೆ. ಎಷ್ಟು ಗಂಟೆಯಿಂದ ಎಷ್ಟು ಗಂಟೆವರೆಗೂ ಕಂರೆಟ್ ಹೋಗುತ್ತೆ ಎಂಬುದವ ಬಗ್ಗೆ ಮೊದಲೇ ನಿಮ್ಮ ಮೊಬೈಲ್’ಗೆ ಮೆಸೇಜ್ ಬರುತ್ತೆ. ಹೀಗೊಂದು ಪ್ಲಾನ್ ನ ಬೆಸ್ಕಾಂ ಅಧಿಕಾರಿಗಳು ಮಾಡತ್ತಿದ್ದಾರೆ.
ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಕನಸಿನ ಬೆಸ್ಕಾಂ ಇಲಾಖೆ ನನಸು ಮಾಡುತ್ತಿದೆ. ಈಗಾಗಲೇ ನಗರದಲ್ಲಿರುವ 30 ಲಕ್ಷ ಗ್ರಾಹಕರ ಮೊಬೈಲ್ ಸಂಖ್ಯೆಯನ್ನ ಪಡೆದುಕೊಂಡಿರುವ ಬೆಸ್ಕಾಂ ಅಧಿಕಾರಿಗಳು,ಬೆಸ್ಕಾಂ ವೈಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದಾರೆ . ಇದರಿಂದ ಕರೆಂಟ್ ಹೋಗುವ ಹತ್ತು ನಿಮಿಷದ ಮುಂಚೆ ಮೊಬೈಲ್ ಗಳಿಗೆ ಅರ್ಲಟ್ ಮೆಸೇಜ್ ಬರುತ್ತೆ. ನಗರದ ಸುತ್ತಮುತ್ತಲಿನ ಹಳ್ಳಿಗಳಿಗೂ ಈ ಸೇವೆ ಸಿಗಲ್ಲಿದೆ. ಈ ತಿಂಗಳ ಅಂತ್ಯದಲ್ಲಿ ಹೊಸ ಪ್ಲಾನ್ ಜಾರಿಯಾಗಲ್ಲಿದೆ..

Comments are closed.