ಕೊಪ್ಪಳ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನಿಗೆ ಸಾರ್ವಜನಿಕರು ಸಕಾಲದಲ್ಲಿ ನೆರವು ನೀಡುವ ಬದಲು ಘಟನೆಯನ್ನು ಮೊಬೈಲ್ಗಳಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ವಿಡಿಯೊ ಇದೀಗ ವೈರಲ್ ಆಗಿದೆ.
ಈ ಘಟನೆ ಕೊಪ್ಪಳದಲ್ಲಿ ಬುಧವಾರ ನಡೆದಿದೆ. ಸೈಕಲ್ ಸವಾರಿ ಮಾಡುತ್ತಿದ್ದ ದೇವರಾಜ ಅರಸು ಕಾಲೊನಿ ನಿವಾಸಿ ಅನ್ವರ್ ಅಲಿ (18) ಮೃತಪಟ್ಟವನು.
ಹೊಸಪೇಟೆಯಿಂದ ಹುಬ್ಬಳ್ಳಿಗೆ ಸಂಚರಿಸುತ್ತಿದ್ದ ಬಸ್ ಹಾಗೂ ಬೈಸಿಕಲ್ ನಡುವೆ ಡಿಕ್ಕಿ ಸಂಭವಿಸಿತು. ತಕ್ಷಣ ಸಾರ್ವಜನಿಕರು ಸೇರಿದರು. ಆದರೆ ಯಾರೂ ನೆರವು ನೀಡಲು ಮುಂದಾಗಲಿಲ್ಲ.
ಅಂಬುಲೆನ್ಸ್ ಬರುವ ವೇಳೆಗೆ ಬಾಲಕನ ದೇಹದಿಂದ ವಿಪರೀತ ರಕ್ತಸ್ರಾವ ಆಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಯಾರಾದರೂ ನೆರವು ನೀಡಿ ಆಸ್ಪತ್ರೆಗೆ ಸಾಗಿಸಿದ್ದರೆ ಬಾಲಕ ಬದುಕುಳಿಯುತ್ತಿದ್ದ.
Comments are closed.