ಕರ್ನಾಟಕ

ಶಿಕ್ಷಕರ ನಿಂದನೆ: ವಿದ್ಯಾರ್ಥಿ ಅತ್ಮಹತ್ಯೆ

Pinterest LinkedIn Tumblr


ಬೆಂಗಳೂರು, ಫೆ. ೧ – ಸ್ನೇಹಿತರು ಹೇಳಿದ ಚಾಡಿ ಮಾತನ್ನು ಕೇಳಿ ತನ್ನ ಬಗ್ಗೆ ಶಿಕ್ಷಕರ ಬಳಿ ಚಾಡಿ ಹೇಳಿದ್ದಕ್ಕೆ ಶಿಕ್ಷಕರು ನಿಂದಿಸಿದ್ದರಿಂದ ಮನನೊಂದ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಮಾದನಾಯಕನಹಳ್ಳಿ ನಿನ್ನೆ ರಾತ್ರಿ ನಡೆದಿದೆ.
ದಾಸನಪುರದ ವಿಕಾಸ್(೧೪) ಮೃತ ವಿದ್ಯಾರ್ಥಿಯಾಗಿದ್ದಾನೆ,ಮೃತ ವಿಕಾಸ್ ಆಚಾರ್ಯ ನೆಲಮಂಗಲದ ಗುರು ಪರಂಪರ ಶಾಲೆಯಲ್ಲಿ ೭ ನೇ ತರಗತಿ ಓದುತ್ತಿದ್ದು ಶಾಲೆಯಿಂದ ಮನೆಗೆ ಬಂದನವನ್ನು ಕಳೆದ ರಾತ್ರಿ ಡೆತ್ ನೋಟ್ ಬರೆದಿಟ್ಟು, ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಾಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಅನಾವಶ್ಯವಾಗಿ ನನ್ನ ಬಗ್ಗೆ ಬಳಿ ಚಾಡಿ ಹೇಳಿದ್ದು ಶಿಕ್ಷಕರು ನಿಂದಿಸಿದ್ದರು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಕಾಸ್ ಆತ್ಮಹತ್ಯೆಗೆ ಶರಣಾಗುವ ಮುನ್ನ ಬರೆದ ಪತ್ರದಲ್ಲಿ ತಿಳಿಸಿದ್ದಾನೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.