ಕರ್ನಾಟಕ

ಎರಡು ಸಂಸಾರ: ಗುಟ್ಟು ತಿಳಿದ ಮೊದಲ ಪತ್ನಿ ರಂಪಾಟ!

Pinterest LinkedIn Tumblr


ಹಾಸನ(ಜ.23): ಸುಂದರವಾದ ಸಂಸಾರವಿದ್ದರೂ ಗಂಡ ಮತ್ತೊಂದು ಮದುವೆಯಾಗಿ ಕದ್ದು ಮುಚ್ಚಿ ಸಂಸಾರ ಶುರುಮಾಡಿದ್ದ. ಈ ವಿಷಯ ತಿಳಿದ ಮೊದಲನೆ ಹೆಂಡತಿ, ಎರಡನೇ ಹೆಂಡತಿಯನ್ನು ಬೀದಿಯಲ್ಲೇ ದರ ದರನೆ ಎಳೆದಾಡಿದ್ದಾಳೆ.
ಈ ಘಟನೆ ಹಾಸನದಲ್ಲಿ ನಡೆದಿದ್ದು, ಗಂಡನ ಸಂಸಾರದ ಗುಟ್ಟು ಬೀದಿಗೆ ಬಿದ್ದಿದೆ. ಕಳೆದ 8 ವರ್ಷಗಳ ಹಿಂದೆ ಪ್ರಭಾಕರ್​ ಹಾಗೂ ಸೌಮ್ಯ ಮದುವೆಯಾಗಿದ್ದರು ಒಬ್ಬ ಮಗ ಕೂಡಾ ಇದ್ದಾನೆ. ಹೀಗಿದ್ದರೂ ಪ್ರಭಾಕರ್​ ಕೆಲ ವರ್ಷಗಳಿಂದ ವಿಜಯಲಕ್ಷಿ ಎಂಬಾಕೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ಬಗ್ಗೆ ಅನೇಕ ಬಾರಿ ನ್ಯಾಯ ಪಂಚಾಯ್ತಿ ಆಗಿದ್ದಲ್ಲದೆ, ವಿಚಾರ ಪೊಲೀಸರವರೆಗೂ ಹೋಗಿತ್ತು. ಇನ್ನು ಈ ಬಗ್ಗೆ ಪ್ರಭಾಕರ್ ಹಾಗೂ ಹಾಗೂ ವಿಜಯಲಕ್ಷ್ಮಿ ಕಳೆದ 20 ದಿನದ ಹಿಂದೆಯಷ್ಟೇ ಮುಚ್ಚಳಿಕೆ ಪತ್ರ ಕೂಡ ಬರೆದುಕೊಟ್ಟಿದ್ದರು.
ಇಷ್ಟಾದರೂ ಪ್ರಭಾಕರ್​ ಹಳೇ ಚಾಳಿ ಬಿಟ್ಟಿರಲಿಲ್ಲ. ಅಲ್ಲದೆ ಪ್ರಭಾಕರ್ ಹಾಗೂ ವಿಜಯಲಕ್ಷ್ಮಿ ಕದ್ದು ಮುಚ್ಚಿ ಮದುವೆಯೂ ಆಗಿದ್ದರು. ಈ ವಿಚಾರ ತಿಳಿದ ಮೊದಲನೆ ಹೆಂಡತಿ ಸೌಮ್ಯ, ಎರಡನೆ ಹೆಂಡತಿ ವಿಜಯಲಕ್ಷ್ಮಿ ಮನೆಗೆ ಹೋಗಿ ಆಕೆ ಮೇಲೆ ಹಲ್ಲೆ ಮಾಡಿದ್ದಾಳೆ. ಮನೆಯಿಂದ ಹೊರಗಡೆ ಎಳೆದಾಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ಬಗ್ಗೆ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.