ಕರ್ನಾಟಕ

ಮಂಡ್ಯದಲ್ಲಿ ಮತ್ತೊಬ್ಬ ಜೆಡಿಎಸ್ ಕಾರ್ಯಕರ್ತರನ ಬರ್ಬರ ಹತ್ಯೆ

Pinterest LinkedIn Tumblr

murder2

ಮಂಡ್ಯ: ಹೊಸ ವರ್ಷದ ದಿನವೇ ಮಂಡ್ಯ ಜಿಲ್ಲೆಯಲ್ಲಿ ಮತ್ತೊಬ್ಬ ಜೆಡಿಎಸ್ ಕಾರ್ಯಕರ್ತನ ಬರ್ಬರ ಹತ್ಯೆಯಾಗಿದೆ. ಇದು ಕಳೆದ ಹತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಜೆಡಿಎಸ್ ಕಾರ್ಯಕರ್ತನ ನಾಲ್ಕನೇ ಕೊಲೆಯಾಗಿದೆ.

ಶನಿವಾರ ತಡರಾತ್ರಿ ಮೈಸೂರು -ಕೆ.ಆರ್‌.ಪೇಟೆ ಮುಖ್ಯ ರಸ್ತೆಯಲ್ಲಿ ಮರುಕನ ಹಳ್ಳಿ ಹರೀಶ್‌(ಗುಂಡ) ಎನ್ನುವ ಕಾರ್ಯಕರ್ತನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆಗೈದುಪರಾರಿಯಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು , ಸ್ಥಳಕ್ಕೆ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ. ರಾಜಕೀಯ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು ಶಂಕಿತ ಆರೋಪಿಗಳ ಮನೆಗಳಿಗೆ ಬೆಂಕಿ ಹಚ್ಚಿದ ಬಗ್ಗೆ ವರದಿಯಾಗಿದೆ.

ಡಿಸೆಂಬರ್ 24 ರಂದು ಮಳವಳ್ಳಿ ತಾಲೂಕಿನ ಸೂನಗನಹಳ್ಳಿ ಗ್ರಾಮದ ಜೆಡಿಎಸ್ ಕಾರ್ಯಕರ್ತ ಕೇಬಲ್ ಕುಮಾರ್‍ನನ್ನ ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಲಾಗಿತ್ತು. ನಂತರ ಡಿಸೆಂಬರ್ 25 ರಂದು ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆಯಾಗಿ, ಜೆಡಿಎಸ್ ಕಾರ್ಯಕರ್ತರಾದ ಮುತ್ತುರಾಜ್ ಮತ್ತು ನಂದೀಶ್ ಎಂಬುವವರ ಜೋಡಿ ಕೊಲೆಯಾಗಿತ್ತು.

ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಹಾಗೂ 24 ಗಂಟೆಯೊಳಗೆ ಕೊಲೆ ಆರೋಪಿಗಳನ್ನು ಬಂಧಿಸುವ ಎಸ್‍ಪಿ ರವಿ ಚನ್ನಣ್ಣವರ್ ವಿಶ್ವಾಸ ನೀಡಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಎರಡು ತಂಡಗಳ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Comments are closed.