ಕರ್ನಾಟಕ

ಹಣ ನೀಡದ ಬ್ಯಾಂಕಿಗೆ ಬೀಗ ಜಡಿದ ಜನ

Pinterest LinkedIn Tumblr

bank-lock-finalಬಳ್ಳಾರಿ: ತಮ್ಮ ಖಾತೆಯಲ್ಲಿರುವ ಹಣವನ್ನು ತಮಗೆ ನೀಡಿ ಎಂದು ಗ್ರಾಹಕರು ಕೇಳಿದರಿಂದ ಬ್ಯಾಂಕ್ ಸಿಬ್ಬಂದಿ ಹಣ ನಿಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬ್ಯಾಂಕ್‍ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲೆಯ ಕೊರ್ಲಾಗುಂದಿ ಗ್ರಾಮದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನಲ್ಲಿ ಈ ಘಟನೆ ನಡೆದಿದೆ. ಗ್ರಾಹಕರು ತಮ್ಮ ಖಾತೆಯಿಂದ ಹತ್ತು ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ ಕೇವಲ ಎರಡು ಸಾವಿರ ರೂ. ಹಣ ನೀಡಲು ಮುಂದಾಗಿತ್ತು.

ಬ್ಯಾಂಕ್ ಗ್ರಾಹಕರಿಗೆ ಎರಡು ಸಾವಿರ ಹಣ ನೀಡಲು ಮುಂದಾದ ಸಂದರ್ಭದಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಬ್ಯಾಂಕಿನ ಸಿಬ್ಬಂದಿಗಳನ್ನು ಹೊರ ಹಾಕಿ ಬ್ಯಾಂಕ್‍ಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿತ್ತು. ನೋಟ್ ಬ್ಯಾನ್ ಹಿನ್ನಲೆಯಲ್ಲಿ ಎಲ್ಲಡೆ ಚಿಲ್ಲರೆ ಸಮಸ್ಯೆ ಆಗಿರುವದರಿಂದ ಡ್ರಾ ಮಾಡುವ ಹಣದ ಮೇಲೆ ಮಿತಿಯನ್ನು ವಿಧಿಸಲಾಗಿದೆ.

Comments are closed.