ಕರ್ನಾಟಕ

ಸರ್ಕಾರ ನನ್ನ ಕೈಗೆ ಕೊಡಿ ಕೊಲೆಪ್ರಕರಣಗಳ ತನಿಖೆ ಮಾಡ್ತೀನಿ: ಶೋಭಾ ಕರಂದ್ಲಾಜೆ

Pinterest LinkedIn Tumblr

shobha2ಮೈಸೂರು: ಸರ್ಕಾರವನ್ನು ನನ್ನ ಕೈಗೆ ಕೊಡಿ ಕೊಲೆಪ್ರಕರಣಗಳ ತನಿಖೆ ಮಾಡುತ್ತೇನೆ ಎಂದು ಚಿಕ್ಕಮಗಳೂರು ಹಾಗೂ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಪಿರಿಯಾಪಟ್ಟಣದ ಬಳಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಮಾಗಳಿ ರವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಯ ಜವಾಬ್ದಾರಿ ಹೊತ್ತಿರುವ ಕಾಂಗ್ರೆಸ್ ಸರಕಾರ ಕಳೆದ ಎರಡೂವರೆ ವರ್ಷಗಳಲ್ಲಿ 14 ಕೊಲೆಗಳ ಹಿಂದೆ ಯಾರಿದ್ದಾರೆ ಅಂತಾ ಪತ್ತೆ ಮಾಡುವ ಜವಾಬ್ದಾರಿಯನ್ನು ಕೂಡ ಹೊಂದಿದೆ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದ ಈ ಸರ್ಕಾರದಲ್ಲಿ ಈವರೆಗೂ ಕೊಲೆಗುಡುಕರನ್ನು ಪತ್ತೆ ಮಾಡಿಲ್ಲ. ಹೀಗಾಗಿ ಇದೊಂದು ಕೊಲೆಗಡುಕರ ರಾಜ್ಯ ಎಂದಲ್ಲಿ ತಪ್ಪಿಲ್ಲ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದದರಾಮಯ್ಯ ಅವರು ತನ್ನ ಕುರ್ಚಿ ಹಾಗೂ ಮಂತ್ರಿ ಸ್ಥಾನವನ್ನು ರಕ್ಷಣೆ ಮಾಡುವ ಸಲುವಾಗಿ ಅವರ ಬಾಯಿ ಮುಚ್ಚಿಸುವಂತಹ ಕೆಲಸವನ್ನು ಮಾಡ್ತಾ ಇದೆ. ಶೋಭಾ ಮಾತಾಡಿದ್ರೆ ಶೋಭಾನ ಬಾಯಿ ಮುಚ್ಚಿಸ್ತೀರಿ, ಪ್ರತಾಪ್ ಮಾತಾಡಿದ್ರೆ ಪ್ರತಾಪ್ ಬಾಯಿ ಮುಚ್ಚಿಸ್ತೀರಿ. ನಿಮ್ಮಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರವನ್ನು ನಮ್ಮ ಕೈಗೆ ಕೊಡಿ. ನಾವು ತನಿಖೆ ಮಾಡ್ತೀವಿ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪರಿಯಾಪಟ್ಟಣದ ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದ ರವಿ ನವೆಂಬರ್ 4ರಂದು ರಾತ್ರಿ ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅನುಮಾನಸ್ಪದವಾಗಿ ಸಾವನಪ್ಪಿದ್ದರು.

Comments are closed.