ಕರ್ನಾಟಕ

ಕಾಡಾನೆ ದಾಳಿಗೆ ಅರಣ್ಯ ವೀಕ್ಷಕ ಸಾವು

Pinterest LinkedIn Tumblr

tpelephantರಾಮನಗರ: ಕನಕಪುರ ತಾಲೂಕಿನ ಕಾವೇರಿ ವನ್ಯ ಜೀವಿ ಧಾಮದ ಸಂಗಮ ವಲಯದಲ್ಲಿ ಕಾಡಾನೆ ದಾಳಿಗೆ ಅರಣ್ಯ ವೀಕ್ಷಕ ಸಾವಿಗೀಡಾಗಿದ್ದಾರೆ.

ಸಂಗಮ ವಲಯದಲ್ಲಿನ ದೂಂತೂರು ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ಗಸ್ತು ಹೋಗಿದ್ದಾಗ ಆನೆ ದಾಳಿ ನಡೆಸಿದ್ದು, ಅರಣ್ಯ ವೀಕ್ಷಕ ದೊಡ್ಡಶೆಟ್ಟಿ (55) ಮೃತರಾಗಿದ್ದಾರೆ.

ದೊಡ್ಡಶೆಟ್ಟಿ ಸೇರಿದಂತೆ ನಾಲ್ವರು ಸಿಬ್ಬಂದಿ ಅರಣ್ಯ ವಲಯದಲ್ಲಿ ಗಸ್ತು ತಿರುಗುತ್ತಿದ್ದರು. ಈ ನಡುವೆ ಎದುರಾದ ಕಾಡಾನೆ ಸೊಂಡಿಲಿನಲ್ಲಿ ಹಿಡಿದು ಬಡಿದ ಪರಿಣಾಮ ಅರಣ್ಯ ವೀಕ್ಷಕ ಪ್ರಾಣ ಬಿಟ್ಟಿದ್ದಾರೆ. ಉಳಿದ ಮೂವರು ಅಪಾಯದಿಂದ ಪಾರಾಗಿದ್ದಾರೆ.

ದೊಡ್ಡಶೆಟ್ಟಿ ಅವರು ಚನ್ನಪಟ್ಟಣದ ಪುಟ್ಟಯ್ಯನದೊಡ್ಡಿ ಗ್ರಾಮದ ನಿವಾಸಿ ಯಾಗಿದ್ದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.