ಕರ್ನಾಟಕ

ಟಿಪ್ಪು ಜಯಂತಿಗೆ ವಿರೋಧ ಮಾಡುವುದು ಸರಿಯಲ್ಲ: ಎಚ್​.ವಿಶ್ವನಾಥ್

Pinterest LinkedIn Tumblr

vishwanathಮಡಿಕೇರಿ (ಅ.31): ಟಿಪ್ಪು ಜಯಂತಿಗೆ ವಿರೋಧ ಮಾಡುವುದು ಸರಿಯಲ್ಲ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದ್ದಾರೆ.
ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ, ಇಷ್ಟ ಇರುವವರು ಜಯಂತಿ ಆಚರಣೆಗೆ ಹೋಗುತ್ತಾರೆ ಇಷ್ಟ ಇಲ್ಲದವರು ಹೋಗುವುದು ಬೇಡ, ಎಂದು ವಿಶ್ವನಾಥ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ಹೋಗುತ್ತಿರುವುದು ಬೇಸರ ತಂದಿದೆ, ಸಂಧ್ಯಾಕಾಲದಲ್ಲಿ ಅವರು ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು, ನಾವು ಮನವೊಲಿಸುವ ಪ್ರಯತ್ನ ಮಾಡಿದರೂ ಫಲಿಸಲಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

Comments are closed.