ಕರ್ನಾಟಕ

ಅಪ್ರಾಪ್ತೆ ಮೇಲೆ ಶಿವಮೊಗ್ಗದಲ್ಲಿ ಸಾಮೂಹಿಕ ಅತ್ಯಾಚಾರ

Pinterest LinkedIn Tumblr

rape

ಶಿವಮೊಗ್ಗ: ಬೆಂಗಳೂರು ಮೂಲದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಶಿವಮೊಗ್ಗದ ಹೊರವಲಯ ಸಕ್ರೆ ಬೈಲಿನಲ್ಲಿ ನಡೆದಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಲೆ ಶಿವಮೊಗ್ಗದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಸುರಭಿ ಮಹಿಳಾ ಸಾಂತ್ವನ ಕೇಂದ್ರ ಎಂಬ ಮಹಿಳಾ ಸಂಘಟನೆಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನ ವಿಶ್ವೇಶ್ವರ ಲೇಔಟ್ ನ ವಿದ್ಯಾರ್ಥಿನಿ ಕೋಲಾರದಲ್ಲಿಸ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಕೋಲಾರದಿಂದ ಬೆಂಗಳೂರಿನ ತನ್ನ ಮನೆಗೆ ಬಂದಾಗ ತನ್ನ ತಾಯಿಯ ಅನೈತಿಕ ಸಂಬಂಧವನ್ನು ಕಣ್ಣಾರೆ ನೋಡಿದ ಆಕೆ ಮನೆ ಬಿಟ್ಟು ಬಂದು ರೈಲು ಹತ್ತಿದ್ದಾಳೆ. ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದ ಆಕೆ ಅಲ್ಲಿ ಒಂಟಿಯಾಗಿ ಕುಳಿತಿದ್ದಳು. ಈ ವೇಳೆ ಅಲ್ಲಿಗೆ ಬಂದ ಆಟೋ ಚಾಲಕ ಶಾರೂಕ್ ಎಂಬಾತನ ಬಳಿ ತನ್ನ ವಿಷಯವನ್ನೆಲ್ಲಾ ತಿಳಿಸಿದ್ದಾಳೆ.

ಆಕೆಯನ್ನು ಸುಲಭವಾಗಿ ವಂಚಿಸಬಹುದು ಎಂದು ತಿಳಿದ ಆತ ಸಹಾಯ ಮಾಡುವ ಭರವಸೆ ಕೊಟ್ಟು ಆಕೆಯನ್ನು ಆಟೋದಲ್ಲಿ ಕೂರಿಸಿಕೊಂಡು ಹೊರಟಿದ್ದಾನೆ. ನಂತರ ತನ್ನ ಸ್ನೇಹಿತರಾದ ಅಮ್ಜಾದ್. ಟೌಫೀಕ್ ಎಂಬುವರ ಜೊತೆ ಸೇರಿ ಸಕ್ರೆಬೈಲಿನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು ಎಂದು ಅಪ್ರಾಪ್ತೆ ದೂರು ದಾಖಲಿಸಿದ್ದಾಳೆ.

ನಂತರ ಅಲ್ಲಿಂದ ಆಕೆಯನ್ನು ಕರೆ ತಂದು ಅಮ್ಜಾದ್ ಭಾವ ಯೂಸೂಫ್ ಮನೆಯಲ್ಲಿರಿಸಿದ್ದ. ಸುಮಾರು ಒಂದು ತಿಂಗಳ ಕಾಲ ಆಕೆಯನ್ನು ಆ ಮನೆಯಲ್ಲಿರಿಸಲಾಗಿತ್ತು. ಈ ವೇಳೆ ಆಕೆಯನ್ನು ಮನೆಯಿಂದ ಹೊರ ಹೋಗಲು ಬಿಡದೇ ಕೂಡಿ ಹಾಕಲಾಗಿತ್ತು, ಈ ವೇಳೆ ಆಕೆ ಆ ತಿಂಗಳಿನಲ್ಲಿ ಮುಟ್ಟಾಗಿರಲಿಲ್ಲ. ನಂತರ ಆರೋಪಿ ಆಕೆಯನ್ನು ಕರೆದು ಕೊಂಡು ಹೋಗಿ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿದ್ದಾನೆ.

ಇತ್ತ ಬೆಂಗಳೂರಿನಲ್ಲಿ ಅಪ್ರಾಪ್ತೆಯ ತಾಯಿ ಮಗಳು ನಾಪತ್ತೆಯಾಗಿದ್ದಾಳೆಂದು ದೂರು ದಾಖಲಿಸಿದ್ದಳು. ಈ ದೂರನ್ನು ನೋಡಿದ ಯೂಸೂಫ್ ತನ್ನ ಮನೆಯಲ್ಲಿದ್ದ ಆಕೆಯನ್ನು ಕರೆತಂದು ಮಹಿಳಾ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾನೆ. ಈಕೆ ರೈಲ್ವೆ ನಿಲ್ದಾಣದಲ್ಲಿದ್ದಳು. ಹೀಗಾಗಿ ಇಲ್ಲಿ ಕರೆತಂದು ಬಿಟ್ಟಿರುವುದಾಗಿ ಹೇಳಿದ್ದಾನೆ, ನಂತರ ಆಕೆಯನ್ನು ಸುರಭಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆ ತರಲಾಯಿತು, ಅಲ್ಲಿ ಆಕೆ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದಾಳೆ, ಆ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಆಕೆಯ ತಾಯಿಯನ್ನು ಶಿವಮೊಗ್ಗಕ್ಕೆ ಕರೆಸಲಾಗಿದ್ದುಷ ಇಬ್ಬರಿಗೂ ಕೌನ್ಸೆಲಿಂಗ್ ಮಾಡಲಾಗುವುದು ಎಂದು ಶಿವಮೊಗ್ಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಗೀತಾ ಶಿವಮೂರ್ತಿ ಹೇಳಿದ್ದಾರೆ.

ಸೆಪ್ಟಂಬರ್ 7 ರಂದು ಮೂವರಿಂದ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಇದಕ್ಕೆ ಸಹಕರಿಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಉಳಿದ ಇಬ್ಬರ ಬಂಧನಕ್ಕಾಗಿ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments are closed.