ಮೈಸೂರು(ಅ.22): ಸಚಿವರ ಎದುರೇ ಪೊಲೀಸನೊಬ್ಬ ರೈತನಿಗೆ ಕಪಾಳಮೋಕ್ಷ ಮಾಡಿದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿ ನಡೆದಿದೆ.
ಸರ್ಕಾರ ತಮಿಳುನಾಡಿಗೆ ನೀರು ಬಿಡುವುದನ್ನ ವಿರೋಧಿಸಿ ಸಚಿವ ಮಹಾದೇವಪ್ಪ ಮುಂದೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದನು. ಇದನ್ನ ಕಂಡ ಸರ್ಕಲ್ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ರೈತನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ರೈತನಿಗೆ ಕಪಾಳ ಮೋಕ್ಷ ಮಾಡಿದರೂ ಸಚಿವರು ಮಾತ್ರ ಏನು ಮಾತನಾಡದೆ ಸುಮ್ಮನಿದ್ದಿದ್ದು ರೈತರನ್ನು ಇನ್ನಷ್ಟು ಕೆರಳಿಸಿತು.
ಕರ್ನಾಟಕ
Comments are closed.