ರಾಯಚೂರು: ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ದುಷ್ಕರ್ಮಿಯೊಬ್ಬ ಹಾಡಗಲೇ ಕಚೇರಿಯಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರೋ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಮರೆಡ್ಡಿ ಹಲ್ಲೆಗೊಳಗಾಗಿರುವ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ. ತಾಲೂಕು ಪಂಚಾಯ್ತಿ ಕಚೇರಿಗೆ ಬಂದ ಎನ್.ಮಲ್ಕಾಪುರ ಗ್ರಾಮದ ಗುಂಡ್ರವಳ್ಳಿ ಕರಿಯಪ್ಪ ಎಂಬವನು ಟವೆಲ್ನಲ್ಲಿ ಕಲ್ಲು ಸುತ್ತಿಕೊಂಡು ರಾಮರೆಡ್ಡಿ ಮೇಲೆ ಹಲ್ಲೆ ಮಾಡಿದ್ದಾನೆ.
ಒಂದೇ ದಿನ ನಾಲ್ಕು ಬಾರಿ ರಾಮರೆಡ್ಡಿ ಅವರನ್ನ ಭೇಟಿ ಮಾಡಿದ ಕರಿಯಪ್ಪ, ತನಗೆ ಸಣ್ಣಪುಟ್ಟ ಗುತ್ತಿಗೆಗಳನ್ನ ನೀಡಬೇಕು ಅಂತ ಕೇಳಿದ್ದಾನೆ. ಪಿಡಿಓಗಳ ವರ್ಗಾವಣೆಗೆ ಆಗ್ರಹಿಸಿದ್ದಾನೆ. ಆರ್ಟಿಐ ನಲ್ಲಿ ಕೇಳಿದ್ದ ಮಾಹಿತಿಯನ್ನ ಇನ್ನೂ ಯಾಕೆ ಕೊಟ್ಟಿಲ್ಲ ಅಂತ ದಬಾಯಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದಿದೆ. ಮೊದಲೇ ಹಲ್ಲೆಗೆ ಸಿದ್ಧತೆ ಮಾಡಿಕೊಂಡು ಬಂದಿದ್ದ ಕರಿಯಪ್ಪ ಟವೆಲ್ನಲ್ಲಿ ಸುತ್ತಿದ್ದ ಕಲ್ಲಿನಿಂದ ರಾಮರೆಡ್ಡಿಗೆ ಹೊಡೆದಿದ್ದಾನೆ.
rcr-1ಇದರಿಂದ ಕಚೇರಿಯಲ್ಲಿನ ಟೇಬಲ್ ಗ್ಲಾಸ್ ಪುಡಿಪುಡಿಯಾಗಿದೆ. ಆಗ ತಪ್ಪಿಸಿಕೊಳ್ಳಲು ರಾಮರೆಡ್ಡಿ ಹೊರಗಡೆ ಓಡಿ ಬಂದಿದ್ದಾರೆ. ಅವರ ಬೆನ್ನುಬಿಡದ ಕರಿಯಪ್ಪ ಕಚೇರಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿರುವುದು ಸಿಸಿ ಕ್ಯಾಮೆರಾಲ್ಲಿ ಸೆರೆಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಕರಿಯಪ್ಪನನ್ನ ಬಂಧಿಸಲಾಗಿದೆ.
ಸದ್ಯಕ್ಕೆ ರಾಮರೆಡ್ಡಿ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Comments are closed.