ಕರ್ನಾಟಕ

ಇಂಜಿನಿಯರ್ ಮೇಲೆ ಹಲ್ಲೆಗೆ ಮುಂದಾದ ಜೆಡಿಎಸ್‌ ಶಾಸಕ

Pinterest LinkedIn Tumblr

narayanaಮಂಡ್ಯ: ಕೆ.ಆರ್‌.ಪೇಟೆ ಜೆಡಿಎಸ್‌ ಶಾಸಕ ನಾರಾಯಣ ಗೌಡ ಅವರು ಹೇಮಾವತಿ ಜಲಾಶಯ ಯೋಜನೆಯ ಇಂಜಿನಿಯರ್‌ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ನಡೆದಿದೆ.

ಬುಧವಾರ ಇಂಜಿನಿಯರ್‌ ನಾರಾಯಣ್‌ ಅವರ ಕಚೇರಿಗೆ ಬೆಂಬಲಿಗರೊಂದಿಗೆ ಆಗಮಿಸಿದ ಶಾಸಕ ನಾರಾಯಣ ಗೌಡ ಅವರು ಅವಾಚ್ಯ ಶಬ್ದ ಬಳಸಿ ಬೈದಿದ್ದಾರೆ. ಆಮೇಲೆ ಮೇಜಿನ ಮೇಲಿದ್ದ ಫೈಲ್ ಮತ್ತು ಕಾಗದಗಳನ್ನು ಎಸೆದು ಇಂಜಿಯರ್ ಅವರ ಕತ್ತು ಹಿಡಿದು ಎಳೆದಾಡಿದ್ದಾರೆ.

ಕುಪಿತಗೊಂಡಿದ್ದ ನಾರಾಯಣಗೌಡರನ್ನು ಬೆಂಬಲಿಗರು ಮತ್ತು ಪೊಲೀಸರು ಬಂದು ತಡೆದ ನಂತರವೇ ಅಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಹಲ್ಲೆ ಮಾಡಿಲ್ಲ: ನಾನು ಇಂಜಿನಿಯರ್ ಮೇಲೆ ಹಲ್ಲೆ ನಡೆಸಿಲ್ಲ. ರೈತರ ಬೆಳೆಗಳಿಗೆ ನೀರು ಬಿಡದೇ ಇರುವಾಗ ರೈತರು ನನ್ನನ್ನು ಪ್ರಶ್ನಿಸಿದ್ದರು. ರೈತರ ಪರವಾಗಿ ಮಾತನಾಡಲು ನಾನು ಇಂಜಿನಿಯರ್ ಕಚೇರಿಗೆ ಹೋಗಿದ್ದೆ. ನೀವೇ ನನ್ನೊಂದಿಗೆ ಬನ್ನಿ, ರೈತರ ಕಷ್ಟ ನೋಡಿ ಎಂದು ನಾನು ಅವರನ್ನು ಕೈ ಹಿಡಿದು ನನ್ನೊಂದಿಗೆ ಕರೆತರಲು ಯತ್ನಿಸಿದ್ದೇನೆ ಅಷ್ಟೇ ಎಂದು ನಾರಾಯಣ ಗೌಡ ಅವರು ಸುದ್ದಿವಾಹಿನಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Comments are closed.