ಕರ್ನಾಟಕ

ಮೊಹರಂ ಮೆರವಣಿಗೆ ವೇಳೆ ಕ್ಷುಲಕ ಕಾರಣಕ್ಕೆ ಯುವಕನೊಬ್ಬನ ಹತ್ಯೆ

Pinterest LinkedIn Tumblr

muಬೆಂಗಳೂರು: ಮೊಹರಂ ಮೆರವಣಿಗೆ ವೇಳೆ ಕ್ಷುಲಕ ಕಾರಣಕ್ಕೆ ಯುವಕನೊಬ್ಬನನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂ ನಲ್ಲಿ ನಡೆದಿದೆ. ಅಜಾಂ ಪಾಷಾ ಮೃತ ದುರ್ದೈವಿ.

ಮೊಹರಂ ಅಂದ್ರೆ ಅದು ಮುಸ್ಲಿಂಮರಿಗೆ ಪವಿತ್ರವಾದ ಹಬ್ಬ. ಎಲ್ರೂ ಸೇರಿ ರಾತ್ರಿ ಏರಿಯಾ ಏರಿಯಾಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಮೆರಣಿಗೆ ಹೋಗೊದು ಮಾಮೂಲಿ. ಇದೆ ರೀತಿ ಕೆ.ಆರ್ ಪುರಂ ನಲ್ಲಿ ಮೆರವಣಿಗೆ ಹೋಗ್ತಿದ್ದ ಯುವಕರ ಗುಂಪು ಇದ್ದಕಿದ್ದಂತೆ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿತ್ತು. ಅಲ್ಲೊಂದು ಭೀಕರ ಹತ್ಯೆ ನಡೆದು ಹೋಗಿತ್ತು. ಅಮಾಯಕ ಯುವಕನೊಬ್ಬನನ್ನ ದುಷ್ಕರ್ಮಿಗಳು ಹತಾರಗಳಿಂದ ಹೊಡೆದು ಮಲಗಿಸಿಬಿಟ್ಟಿದ್ರು.

ಹೊಸಕೋಟೆಯ ನಿವಾಸಿ ಅಜಂ ಪಾಷ ಇಂದು ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಭಾಗವಹಿಸುವ ಸಲುವಾಗಿ ಕೆ.ಆರ್ ಪುರಂಗೆ ಬಂದಿದ್ದ. ಹೀಗೆ ಬಂದಿದ್ದ ಆಜಂ ಈಗ ಶವವಾಗಿದ್ದಾನೆ. ಗಾಂಜಾ ಗುಂಗಲ್ಲಿದ್ದ ಪುಡಾರಿಗಳ ಕೈಯಲ್ಲಿ ಆಜಂ ಹೆಣವಾಗಿದ್ದಾನೆ.

ನಡೆದಿದ್ದೇನು?: ಮೊಹರಂ ಮೆರವಣಿಗೆ ಕೆ.ಆರ್ ಪುರಂನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹತ್ತಿರ ಬರುತ್ತಿದ್ದಂತೆ ಐದಾರು ಮಂದಿಯ ಯುವಕರ ತಂಡ ಮೆರವಣಿಗೆಗೆ ಸೇರಿಕೊಂಡಿದ್ದಾರೆ. ಸೇರಿದ್ದವರೆಲ್ಲರೂ ಗಾಂಜಾ ನಶೆಯಲ್ಲಿದ್ದರು. ಯಾವಾಗ ಅವರು ಮೆರವಣಿಗೆಗೆ ಸೇರಿಕೊಂಡರೋ ಅಲ್ಲಿ ನೂಕಾಟ ತಳ್ಳಾಟ ಹೆಚ್ಚಾಗ್ತಾ ಹೋಯಿತು. ನೂಕಾಟ ಜಾಸ್ತಿಯಾಗುತ್ತಿದ್ದಂತೆ ಗಾಂಜಾ ನಶೆಯಲ್ಲಿದ್ದವರು ಆಜಂನನ್ನ ತಳ್ಳಾಡಲು ಆರಂಭಿಸಿದ್ದಾರೆ.

ಅದಕ್ಕೆ ಆಜಂ ವಿರೋಧಿಸಿದ್ದಾನೆ. ಯಾವಾಗ ಆಜಂ ಅವಾಜ್ ಹಾಕಿದ್ನೊ ಆಗ ಗಾಂಜಾ ನಶೆಯಲ್ಲಿದ್ದವರು ಹರಿತವಾದ ಆಯುಧದಿಂದ ಆಜಂನ ಎದೆಗೆ ಇರಿದ್ದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ಆಜಂನನ್ನ ತಕ್ಷಣವೇ ಸ್ಥಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಕೆ.ಆರ್. ಪುರಂ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಂ ಮೃತ ದೇಹವನ್ನ ಮರಣೋತ್ತರ ಪರಿಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರಾವಾನಿಸಲಾಗಿದೆ.

Comments are closed.