ಕರ್ನಾಟಕ

ಮಳೆಯ ಕೊರತೆ : ರಾಜ್ಯದ 68 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಣೆ

Pinterest LinkedIn Tumblr

drought_hit_area

ಬೆಂಗಳೂರು: ತೀವ್ರ ಮಳೆ ಕೊರತೆಯಿಂದ ಬೆಳೆಹಾನಿಗೀಡಾದ ರಾಜ್ಯದ 68 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದೆ.ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಂತ್ರಿ ಪರಿಷತ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರ್ಕಾರದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ನಿಗದಿ ಮಾಡಿದ ಮಾನದಂಡದ ಅನ್ವಯ ಈ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ವಾಡಿಕೆಗಿಂತ ಶೇ. 20ರಷ್ಟುಮಳೆ ಕೊರತೆ, ಭೂಮಿಯ ಮೇಲಿನ ತೇವಾಂಶ ಶೇ. 50ರಷ್ಟು ಕೊರತೆ, ಸತತ ನಾಲ್ಕು ವಾರಗಳ ಶುಷ್ಕ ವಾತಾವರಣ, ಬಿತ್ತನೆ ಪ್ರದೇಶದ ಪೈಕಿ ಶೇ.33ರಷ್ಟುಬೆಳೆ ಹಾನಿಗೀಡಾಗಿರುವ ಅಂಶಗಳನ್ನು ಪರಿಗಣಿಸಿ ಬರಪೀಡಿತ ತಾಲೂಕು ಗುರುತಿಸಲಾಗಿದೆ ಎಂದು ಹೇಳಿದರು.

ಬರಪೀಡಿತ ತಾಲೂಕುಗಳು ಯಾವುವು ?
ಕೋಲಾರ ಜಿಲ್ಲೆ- ಬಂಗಾರಪೇಟೆ.
ಚಿಕ್ಕಬಳ್ಳಾಪುರ-ಬಾಗೇಪಲ್ಲಿ.
ತುಮಕೂರು-ಶಿರಾ,
ಚಿತ್ರದುರ್ಗ-ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು.
ಚಾಮರಾಜನಗರ-ಮೊಳಕಾಲ್ಮೂರು, ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಯಳಂದೂರು.
ಮೈಸೂರು-ಹೆಗ್ಗಡದೇವನಕೋಟೆ, ಹುಣಸೂರು, ಕೃಷ್ಣರಾಜನಗರ, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ, ಟಿ.ನರಸೀಪುರ.
ಮಂಡ್ಯ-ಕೃಷ್ಣರಾಜಪೇಟೆ, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ.
ಬಳ್ಳಾರಿ-ಬಳ್ಳಾರಿ.
ಕೊಪ್ಪಳ-ಗಂಗಾವತಿ, ಯಲಬುರ್ಗ.
ರಾಯಚೂರು-ದೇವದುರ್ಗ, ಲಿಂಗಸಗೂರು, ಸಿಂಧನೂರು.
ಯಾದಗಿರಿ-ಶಹಪುರ.
ಬೆಳಗಾವಿ-ಬೈಲಹೊಂಗಲ, ಬೆಳಗಾವಿ, ಗೋಕಾಕ್, ಖಾನಾಪುರ, ರಾಮದುರ್ಗ, ಸವದತ್ತಿ.
ಬಾಗಲಕೋಟೆ-ಬದಾಮಿ, ಬೀಳಗಿ, ಹುನಗುಂದ, ಮುಧೋಳ.
ವಿಜಯಪುರ-ಇಂಡಿ, ವಿಜಯಪುರ, ಮುದ್ದೇಬಿಹಾಳ, ಸಿಂಧಗಿ.
ಗದಗ-ಮುಂಡರಗಿ, ಗದಗ, ಶಿರಹಟ್ಟಿ, ನರಗುಂದ, ರೋಣ.
ಹಾವೇರಿ-ಹಿರೇಕೆರೂರ, ಸವಣೂರ.
ಧಾರವಾಡ-ಕಲಘಟಗಿ, ಕುಂದಗೋಳ, ನವಲಗುಂದ
ಶಿವಮೊಗ್ಗ-ಹೊಸನಗರ, ಸಾಗರ, ತೀರ್ಥಹಳ್ಳಿ.
ಹಾಸನ-ಅರಕಲಗೂಡು, ಅರಸೀಕೆರೆ, ಬೇಲೂರು, ಹಾಸನ.
ಚಿಕ್ಕಮಗಳೂರು-ಕಡೂರು, ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ.
ಕೊಡಗು-ಮಡಿಕೇರಿ, ವಿರಾಜಪೇಟೆ.
ಉತ್ತರಕನ್ನಡ-ಹಳಿಯಾಳ, ಸಿದ್ದಾಪುರ.

Comments are closed.