ಕರ್ನಾಟಕ

ವಿದ್ಯಾರ್ಥಿಯನ್ನು ಕಚ್ಚಿ ಗಾಯಗೊಳಿಸಿದ ಬಿಎಂಟಿಸಿ ಲೇಡಿ ಕಂಡಕ್ಟರ್ !

Pinterest LinkedIn Tumblr

bmtc-condector

ಕಮ್ಮಗೊಂಡನಹಳ್ಳಿ(ಬೆಂಗಳೂರು): ಬಸ್ ಪಾಸ್ ವಿಚಾರವಾಗಿ ವಿದ್ಯಾರ್ಥಿಗಳೊಂದಿಗೆ ಜಗಳ ನಡೆಸಿದ ಬಿಎಂಟಿಸಿ ನಿರ್ವಾಹಕಿ(ಲೇಡಿ ಕಂಡಕ್ಟರ್) ವಿದ್ಯಾರ್ಥಿಯನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಬೆಂಗಳೂರಿನ ಕಮ್ಮಗೊಂಡನಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಜಾಲಹಳ್ಳಿ– ಕೆಆರ್ ಪುರಂ ಮಾರ್ಗದ ಬಸ್ ನಲ್ಲಿ ಬಸ್ ಪಾಸ್ ವಿಚಾರವಾಗಿ ಎಂಎನ್ ಟಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆದ ವಾಗ್ವಾದದಲ್ಲಿ ಸಹನೆ ಕಳೆದುಕೊಂಡ ನಿರ್ವಾಹಕಿ ಅರುಣಾ, ಪುನೀತ್ ಗೌಡ ಎಂಬ ವಿದ್ಯಾರ್ಥಿಯನ್ನು ಥಳಿಸಿ, ಕಚ್ಚಿ ಗಾಯಗೊಳಿಸಿದ್ದಾರೆ. ನಂತರ ನೆರೆದಿದ್ದ ಜನರೊಂದಿಗೆ ಬೀದಿ ರಂಪ ಮಾಡಿ, ಸಂಚಾರಿ ಪೋಲಿಸರೊಡನೆಯೂ ಮಾತಿನ ಚಕಮಕಿ ನಡೆಸಿ ವಿವಾದಕ್ಕೊಳಗಾಗಿದ್ದಾರೆ.

ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ನಿರ್ವಾಹಕಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Comments are closed.