ಯಾದಗಿರಿ: ಚೆಲುವಿನ ಚಿತ್ತಾರ ಸಿನಿಮಾದ ರೀತಿಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದ 21 ವರ್ಷದ ಯುವಕ ಹಾಗೂ 14 ವರ್ಷದ ಬಾಲಕಿಯ ಲವ್ ಸ್ಟೋರಿ ದುರಂತ ಅಂತ್ಯ ಕಂಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ಶಹಾಪೂರ ತಾಲೂಕಿನ ಕನ್ಯೆ ಕೋಳೂರು ಗ್ರಾಮ ಆಟೋ ಚಾಲಕ ಭೀಮರಾಯ ಹಾಗೂ ಅಲ್ಲಿನ 9ನೇ ತರಗತಿ ಓದುತ್ತಿದ್ದ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು. ಕೆಲದಿನಗಳ ಹಿಂದೆ ಈ ಇಬ್ಬರೂ ನಾಪತ್ತೆಯಾಗಿ ಮತ್ತೆ ತಾವಾಗೇ ಗ್ರಾಮಕ್ಕೆ ಹಿಂದಿರುಗಿದ್ದರು.
ನಂತರ ಗ್ರಾಮದಲ್ಲಿ ಯುವಕ ಹಾಗೂ ಬಾಲಕಿಯವರ ಕಡೆಯವರು ಪಂಚಾಯ್ತಿ ಸೇರಿಸಿ ಇಬ್ಬರಿಗೂ ಬುದ್ಧಿವಾದ ಹೇಳಿ ಇತ್ಯರ್ಥ ಮಾಡಿದ್ದರು. ಇತ್ತ, ಇದೇ 12 ರಂದು ಯುವಕನ ಮದುವೆ ಬೇರೊಬ್ಬಳ ಜೊತೆ ನಡೆಯುವುದಿತ್ತು.
ಇದರಿಂದ ನೊಂದ ಯುವಕ ಹಾಗೂ ಬಾಲಕಿ ಇಂದು ಮುಂಜಾನೆ ಇಲ್ಲಿನ ಹಳ್ಳವೊಂದಕ್ಕೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಶಹಾಪೂರ ಸಿಪಿಐ ಅಂಬಾರಾಯ ಕಮಾನಮನಿ ಹಾಗೂ ಗ್ರಾಮೀಣ ಸಿಪಿಐ ಈರಣ್ಣ ದೊಡ್ಡಮನಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Comments are closed.