ಕರ್ನಾಟಕ

ಹೊಸ ತಿರುವು ಪಡೆದ ರ‍್ಯಾಗಿಂಗ್ ಪ್ರಕರಣಕ: ಯಾವುದೇ ರ‍್ಯಾಗಿಂಗ್ ನಡೆದಿರಲಿಲ್ಲ, ಬದಲಿಗೆ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು !

Pinterest LinkedIn Tumblr

karnataka-nursing-student

ಕಲಬುರಗಿ: ನಗರದ ಖಾಸಗಿ ನರ್ಸಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ಕೇರಳ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದಿದೆ ಎನ್ನಲಾಗುತ್ತಿದ್ದ ರ‍್ಯಾಗಿಂಗ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿನಿ ಮೇಲೆ ಯಾವುದೇ ರ‍್ಯಾಗಿಂಗ್ ನಡೆದಿರಲಿಲ್ಲ, ಬದಲಿಗೆ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ವಸತಿ ನಿಲಯದ ಅಧಿಕಾರಿಗಳು ಬುಧವಾರ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ವಸತಿ ನಿಲಯದ ವಾರ್ಡನ್ ಎಸ್ಥಾರ್, ಕೇರಳ ವಿದ್ಯಾರ್ಥಿನಿ ಮೇಲೆ ಹಿರಿಯ ವಿದ್ಯಾರ್ಥಿಗಳು ಯಾವುದೇ ರ‍್ಯಾಗಿಂಗ್ ಮಾಡಿರಲಿಲ್ಲ. ಆಕೆ, ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಹೇಳಿಕೊಂಡಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಶ್ ಶಶಿಕುಮಾರ್ ಅವರು ಪ್ರಕರಣ ಸಂಬಂಧ ಶೀಘ್ರಗತಿಯಲ್ಲಿ ತನಿಖೆ ನಡೆಸುವ ಸಲುವಾಗಿ ವಿಶೇಷ ತನಿಖಾಧಿಕಾರಿಯಾಗಿ ಡಿವೈಎಸ್ ಪಿ ಜಾನ್ಹವಿಯವರನ್ನು ನೇಮಿಸಿದ್ದಾರೆ.

ಘಟನೆ ಕುರಿತಂತೆ ಮಾತನಾಡಿರುವ ಎಸ್ ಪಿ. ಶಶಿಕುಮಾರ್ ಅವರು, ಪ್ರಸ್ತುತ ನಮಗೆ ಬಂದಿರುವ ಮಾಹಿತಿ ಪ್ರಕಾರ, ವಿದ್ಯಾರ್ಥಿನಿ ಕೇರಳದ ಕೋಝಿಕೋಡ್ ಮೂಲದವಳಾಗಿದ್ದಾಳೆಂದು ತಿಳಿದುಬಂದಿದೆ. ಸಂತ್ರಸ್ತೆ ಮೇಲೆ 8 ಹಿರಿಯ ವಿದ್ಯಾರ್ಥಿನಿಯರಿಂದ ರ‍್ಯಾಗಿಂಗ್ ನಡೆದಿದ್ದು, ಜಾತಿ ಕುರಿತಂತೆ ವಿದ್ಯಾರ್ಥಿನಿಗೆ ನಿಂದಿಸಲಾಗಿದೆ. ಅಲ್ಲದೆ, ವಿದ್ಯಾರ್ಥಿನಿಗೆ ಬಲವಂತವಾಗಿ ಟಾಯ್ಲೆಟ್ ಕ್ಲೀನರ್ ಕುಡಿಯುವಂತೆ ಮಾಡಲಾಗಿದೆ ಎಂದು ವಿದ್ಯಾರ್ಥಿನಿ ಎಫ್ಐಆರ್ ನಲ್ಲಿ ದಾಖಲಿಸಿದ್ದಾಳೆಂದು ಹೇಳಿದ್ದಾರೆ.

Comments are closed.