ಕರ್ನಾಟಕ

ಎಚ್ ಡಿಕೆ ಸ್ಟ್ರಾಂಗ್ ಆದ್ರೆ ಗೌಡ್ರು ವೀಕ್ ಆಗ್ತಾರಂತೆ! ಜಾತಕ ಫಲ

Pinterest LinkedIn Tumblr

balaಬೆಂಗಳೂರು:ಎಚ್ ಡಿ ಕುಮಾರಸ್ವಾಮಿ ಸ್ಟ್ರಾಂಗ್ ಆದ್ರೆ ಎಚ್.ಡಿ.ದೇವೇಗೌಡರು ವೀಕ್ ಆಗ್ತಾರಂತೆ! ಹಾಗಾಗಿ ಪಕ್ಷದಲ್ಲಿ ಕುಮಾರಸ್ವಾಮಿಯನ್ನು ಬೆಳೆಯಲು ದೇವೇಗೌಡರು ಬಿಡುತ್ತಿಲ್ಲ…ಇದು ಮಾಗಡಿ ಕ್ಷೇತ್ರದ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಆರೋಪ!

ಜಾತಕವನ್ನು(ಅವರ ಜಾತಕದ ಪ್ರಕಾರ) ನಂಬಿಕೊಂಡಿರುವ ದೇವೇಗೌಡರು ಏನೇ ಆದರೂ ಕುಮಾರಸ್ವಾಮಿಗೆ ಯಾವ ನಿರ್ಧಾರವನ್ನು ತೆಗೆದುಕೊಳ್ಳಲು ಬಿಡುತ್ತಿಲ್ಲ ಎಂದು ನಗರದ ಖಾಸಗಿ ಹೋಟೆಲ್ ನಲ್ಲಿ ಭಿನ್ನಮತೀಯ ಶಾಸಕರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಹೇಳಿದರು.

ಜೆಡಿಎಸ್ ನಿಂದ ಶನಿಗಳು ತೊಲಗಿವೆ ಎಂದು ಎಚ್.ಡಿ.ರೇವಣ್ಣ ಹೇಳಿದ್ದಾರೆ. ನಿಜವಾಗಿ ಶನಿಗಳು ನಾವಲ್ಲ, ಕುಮಾರಸ್ವಾಮಿಯವರಿಗೆ ಎಚ್.ಡಿ.ರೇವಣ್ಣನೇ ನಿಜವಾದ ಶನಿ ಎಂದು ಬಾಲಕೃಷ್ಣ ತಿರುಗೇಟು ನೀಡಿದ್ದಾರೆ. ನಾವು ಅನೇಕ ವಿಚಾರಗಳಲ್ಲಿ ನೋವನ್ನು ಅನುಭವಿಸಿದ್ದೇವೆ. ದೇವೇಗೌಡರು ಎಲ್ಲದಕ್ಕೂ ಮೂಗು ತೂರಿಸಬಾರದು. ದೇವೇಗೌಡರ ಮಾತಿಗೆ ಕುಮಾರಸ್ವಾಮಿ ಮತ್ತೆ ಮಾತನಾಡಲ್ಲ ಎಂದು ದೂರಿದರು.

ಕುಮಾರಸ್ವಾಮಿಯವರನ್ನು ನಮ್ಮ ಕೈಗೆ ಕೊಟ್ಟು ನೋಡಿ. 2018ರ ಚುನಾವಣೆಯಲ್ಲಿ ಅವರನ್ನು ಮತ್ತೆ ಸಿಎಂ ಮಾಡುತ್ತೇವೆ. 2018ರ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇವೆ. ಇಲ್ಲವಾದರೆ ನಮ್ಮ ರಾಜಕೀಯವನ್ನು ನಾವು ನೋಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Comments are closed.