ಕರ್ನಾಟಕ

ಆತ್ಮಹತ್ಯೆಗೆ ಶರಣಾದ ರೈತನ ಮನೆಗೆ ಶಾಸಕರ ಭೇಟಿ

Pinterest LinkedIn Tumblr

farಎನ್.ಆರ್.ಪುರ: ಮಾಡಿದ ಸಾಲ ತೀರಿಸಲಾಗದೆ ಆತ್ಮಸ್ಥೆರ್ಯ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ರೈತ ಉಮೇಶ್ ಮನೆಗೆ ಶೃಂಗೇರಿ ಶಾಸಕ ಡಿ.ಎನ್ ಜೀವರಾಜ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಕೆ.ಕಣಬೂರು ಗ್ರಾಮದ ರೈತ ಉಮೇಶ್ ಮೃತ ದುರ್ದೈವಿ. ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ಮೃತನ ತಾಯಿ ನನ್ನ ಮಗ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ. ಪ್ರಸ್ತುತ ನಮ್ಮ ಸಂಸಾರಕ್ಕೆ ದಿಕ್ಕು ತೋಚದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟರು. ಜೀವರಾಜ್ ಅವರನ್ನು ಸಂತೈಸಿ ನಿಮ್ಮ ಕುಟುಂಬಕ್ಕೆ ಸಿಗಬೇಕಾದ ಸರಕಾರದ ಎಲ್ಲ ಸವಲತ್ತುಗಳನ್ನು ಶೀಘ್ರವೇ ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮೃತನ ಪತ್ನಿಗೆ ವಿಧವಾ ವೇತನ ತಕ್ಷಣ ಸಿಗುವಂತೆ ಮಾಡಿ ಎಂದು ಗ್ರಾಪಂ ಸದಸ್ಯರಿಗೆ ಸೂಚಿಸಿದರು. ರೈತರ ಆತ್ಮ ಹತ್ಯೆ ಈ ಭಾಗದಲ್ಲಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಶಾಸಕರು ಕಳವಳ ವ್ಯಕ್ತಪಡಿಸಿದರು. ಮುತ್ತಿನಕೊಪ್ಪ ಗ್ರಾಪಂ ಸದಸ್ಯರಾದ ಗೋಪಾಲ್, ರತ್ನಮ್ಮ, ರಾಜು, ಸ್ಥಳೀಯ ಮುಖಂಡರಾದ ದೇವರಾಜು, ಬಸಪ್ಪ, ಸುರೇಶ್, ಡೆನ್ನಿ, ಪೌಲೋಸ್ ಇದ್ದರು.

Comments are closed.