ಬೆಂಗಳೂರು,ಮೇ.೮-ರಸ್ತೆ ಬದಿ ನಿಂತಿದ್ದ ವೋಲಾ ಕ್ಯಾಬ್ ಚಾಲಕನನ್ನು ನಾಲ್ವರು ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿ ಚಿನ್ನದಸರ, ಮೊಬೈಲ್ ಹಾಗೂ ಮೂರುವರೆ ಸಾವಿರ ನಗದು ದೋಚಿ ಪರಾರಿಯಾಗಿರುವ ದುರ್ಘಟನೆ ಇಂದು ನಸುಕಿನಲ್ಲಿ ದೊಡ್ಡಬೆಲೆ ಕ್ರಾಸ್ನ ಐಮಾಕ್ಸ್ ಕಂಪನಿ ಬಳಿ ನಡೆದಿದೆ.
ವೋಲಾ ಕ್ಯಾಬ್ ಚಾಲಕ ಚೆನ್ನಸಂದ್ರದ ಮಣಿಕಂಠ ಅವರು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ದೊಡ್ಡಬೆಲೆ ಕ್ರಾಸ್ನ ಐಮಾಕ್ಸ್ ಕಂಪನಿ ಬಳಿ ಮುಂಜಾನೆ ೪.೧೫ರ ವೇಳೆ ನಿಂತಿದ್ದಾಗ ಎರಡು ಬುಲೆಟ್ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಟ್ಟಗಟ್ಟಿ ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ೧೩ ಗ್ರಾಂ ತೂಕದ ಚಿನ್ನದಸರ,೨ ಮೊಬೈಲ್ ಹಾಗೂ ಮೂರುವರೆ ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.