ಕರ್ನಾಟಕ

ಎ.29 ರಂದು ದುಬೈ ಕನ್ನಡ ಪಾಠ ಶಾಲೆಯ ಸಮಾರೋಪ -ಕನ್ನಡ ಪರಿಣತಿ ಪ್ರಮಾಣ ಪತ್ರ ವಿತರಣಾ ಸಮಾರಂಭ

Pinterest LinkedIn Tumblr

Print

ದುಬೈ: ಯುಎಇ ಯ ಕನ್ನಡ ಮಿತ್ರರು ನಡೆಸಿಕೊಂಡು ಬರುತ್ತಿರುವ ಕನ್ನಡ ಪಾಠ ಶಾಲೆ ದುಬೈ -ಯುಎಇ ಯ 2016 ರ ಸಮಾರೋಪ ಸಮಾರಂಭ ಹಾಗೂ ಕನ್ನಡ ಪರಿಣತಿ ಪ್ರಮಾಣ ಪತ್ರ ಕಾರ್ಯಕ್ರಮವು ಎಪ್ರಿಲ್ 29 ರಂದು ಸಾಯಾಂಕಲ 6 ರಿಂದ 10 ರ ವರೆಗೆ ಜರಗಲಿದೆ.

ದುಬೈಯ ಆಲ್ ಬರ್ಶಾದ ಜೆ.ಎಸ್. ಎಸ್. ಇಂಟರ್ ನ್ಯಾಶನಲ್ ಶಾಲೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದುಬೈಯ ರೇಡಿಯೊ ಸ್ಪೈಸ್ ನ ಸಿಇಒ ಶ್ರೀ ಹರ್ಮನ್ ಲೂವಿಸ್, ಫಾರ್ಚುನ್ ಗ್ರೂಪ್ ಅಫ್ ಹೋಟೆಲ್ಸ್ ನ ರೂವರಿ ಪ್ರವೀಣ್ ಕುಮಾರ್ ಶೆಟ್ಟಿ, ಜೆ.ಎಸ್.ಎಸ್ ವಿದ್ಯಾ ಸಂಸ್ಥೆ ದುಬೈಯ ಸಿಇಒ ಡಾ.ಡಿ ಪಿ ಶಿವಕುಮಾರ್, ಚಿಲ್ಲಿವಿಲ್ಲಿ ಸಂಸ್ಠೆಯ ರೂವರಿ ಸತೀಶ್ ವೆಂಕಟರಮಣರವರು ಬಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಕನ್ನಡ ಪಾಠ ಶಾಲೆಯ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಶ್ರೀಮತಿ ಮಾದೇವಿ ಪ್ರಸಾದ್ ರವರಿಂದ ಕ್ಲಾಸಿಕಲ್ ನೃತ್ಯ ಹಾಗು ಕನ್ನಡ ಸ್ಕಿಟ್, ರಸಪ್ರಶ್ನೆ ಕಾರ್ಯಕ್ರಮಗಳು ಜರಗಲಿರುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment