ಬೆಂಗಳೂರು: ಭಾರತ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದ ವೇಳೆ ನಾಯಿಯಿಂದ ಬೊಗಳಿಸಿ ಗಲಾಟೆ ಮಾಡಿದ ಯುವಕನೊಬ್ಬ ಓರ್ವ ವಿದ್ಯಾರ್ಥಿಯನ್ನು ಕೊಲೆ ಮಾಡಿ ಆತನ ಇಬ್ಬರು ಸ್ನೇಹಿತರ ಮೇಲೆ ಹಲ್ಲೆ ನಡೆಸಿರುವ ದುರ್ಘಟನೆ ನಿನ್ನೆ ರಾತ್ರಿ ಜೆಸಿ ನಗರದ ಎಸ್ಕೆ ಗಾರ್ಡನ್ನಲ್ಲಿ ನಡೆದಿದೆ.
ಬಿಷಪ್ ಕಾಟನ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಅವಿನಾಶ್(೨೨)ಕೊಲೆಯಾದವರು, ಗಾಯಗೊಂಡಿರುವ ಅವಿನಾಶ್ ಸ್ನೇಹಿತರಾದ ಡೇವಿಡ್ ಹಾಗೂ ಕೆನೆತ್ ಅವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೃತ್ಯವೆಸಗಿದ್ದ ಎಸ್ಕೆ ಗಾರ್ಡನ್ನ ಜಾನ್ ಕೆನಡಿಯನ್ನು ಪೊಲೀಸರು ಬಂಧಿಸಿದ್ದಾರೆ, ಎಸ್ಕೆ ಗಾರ್ಡನ್ನ ಮನೆ ಬಳಿ ಅವಿನಾಶ್ ಕಳೆದ ರಾತ್ರಿ ೧೦ರ ವೇಳೆ ಸ್ನೇಹಿತರ ಜೊತೆಗೆ ಪ್ರೊಜೆಕ್ಟರ್ ಅಳವಡಿಸಿ ದೊಡ್ಡ ಪರದೆಯಲ್ಲಿ ಇಂಡಿಯಾ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯವನ್ನು ನೋಡುತ್ತಿದ್ದರು.
ಈ ವೇಳೆ ನಾಯಿ ಹಿಡಿದುಕೊಂಡು ವಾಕಿಂಗ್ ಮಾಡುತ್ತಾ ಬಂದ ಜಾನ್ ಕೆನಡಿ ಪರದೆ ನೋಡಿ ನಾಯಿ ಬೊಗಳಿದರೂ ಸುಮ್ಮನಿದ್ದಾನೆ ಇದರಿಂದ ಆಕ್ರೋಶಗೊಂಡ ಅವಿನಾಶ್ ಮತ್ತಿಬ್ಬರು ಜಾನ್ ಕೆನಡಿ ಮೇಲೆ ಹಲ್ಲೆ ನಡೆಸಿದ್ದಾರೆ.
ರೊಚ್ಚಿಗೆದ್ದ ಜಾನ್ ಕೆನಡಿ ಅವಿನಾಶ್ನ ಹೊಟ್ಟಗೆ ಬಲವಾಗಿ ಬಿಯರ್ ಬಾಟಲಿಯ ಚೂರಿನಿಂದ ಇರಿದಿದ್ದಾನೆ ಬಿಡಿಸಿಕೊಳ್ಳಲು ಬಂದ ಡೇವಿಡ್ ಹಾಗೂ ಕೆನೆತ್ ಮೇಲೂ ಹಲ್ಲೆ ನಡೆಸಿದ್ದಾನೆ ಗಂಭೀರವಾಗಿ ಗಾಯಗೊಂಡ ಅವಿನಾಶ್ನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾ. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿರುವ ಜೆಸಿ ನಗರ ಪೊಲೀಸರು ಜಾನ್ನನ್ನು ಬಂಧಿಸಿ ಆತನ ಮತ್ತೊಬ್ಬ ಸಹಚರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.