ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯ ಲಕ್ಷ್ಮಿ ನಡುವಿನ ಭಿನ್ನಾಬಿಪ್ರಾಯ ಮುಂದುವರಿದಿದ್ದು ಇಬ್ಬರು ಸಹಮತದ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ವಿಜಯಲಕ್ಷ್ಮಿ ವಾಸವಿದ್ದ ಅಪಾರ್ಟ್ ಮೆಂಟ್ ಬಳಿ ದರ್ಶನ್ ಹೋಗಿ ಗಲಾಟೆ ಮಾಡಿ, ಈ ಸಂಬಂಧ ಪ್ರಕರಣ ಮಹಿಳಾ ಆಯೋಗದ ಮೆಟ್ಟಿಲೇರಿ ಅಲ್ಲಿ ಇಬ್ಬರು ಹೇಳಿಕೆ ದಾಖಲಿಸಿ ಬಂದಿದ್ದರು.
ಆದರೆ ಇಬ್ಬರ ನಡುವೆ ಹೊಂದಾಣಿಕೆ ಏರ್ಪಡದ ಕಾರಣ ಪರಸ್ಪರ ಸಮ್ಮತಿಯ ಮೇರೆಗೆ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ದರ್ಶನ್ ಕುಟಂಬದ ಆಪ್ತರೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೂ ಪತ್ನಿ ವಿಜಯಲಕ್ಷ್ಮಿ ಅವರಿಗೆ ಪರಿಹಾರ ವಾಗಿ 40 ಕೋಟಿ ರೂ ಹಣ ನೀಡಲು ದರ್ಶನ್ ಒಪ್ಪಿಕೊಂಡಿದ್ದಾರೆ ಎಂದು ಕನ್ನಡದ ವಾರಪತ್ರಿಕೆಯೊಂದು ವರದಿ ಮಾಡಿದೆ.