ಬೆಂಗಳೂರು: ಮೈದಾನದಲ್ಲಿ ಎಷ್ಟೇ ಒತ್ತಡ ಇದ್ದರು ಕೂಡಾ ತಾಳ್ಮೆಯಿಂದಲೇ ತಂಡವನ್ನು ಮುನ್ನಡೆಸುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಪತ್ರಕರ್ತರ ವಿರುದ್ಧ ಗರಂ ಆದ ಘಟನೆ ಗುರುವಾರ ಘಟಿಸಿತು.
ಹೌದು, ಪಂದ್ಯದ ನಂತರ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನಾವು ಬಾಂಗ್ಲಾ ವಿರುದ್ಧ ರೋಚಕವಾಗಿ ಗೆಲುವು ಸಾಧಿಸಿರುವುದು ನಿಮಗೆ ತೃಪ್ತಿ ತಂದಿಲ್ಲ ಎಂಬುದು ನನಗೆ ಗೊತ್ತಿದೆ. ನೀವು ಭಾರತ ಈ ರೀತಿ ಜಯ ದಾಖಲಿಸಿರುವುದನ್ನು ಇಷ್ಟಪಟ್ಟಿರಲಿಲ್ಲ ಅನಿಸುತ್ತದೆ ಎಂದು ಎಂದು ಹಸನ್ಮುಖಿಯಾಗಿ ಹೇಳುವ ಮೂಲಕ ‘ಬಾಂಗ್ಲಾ ವಿರುದ್ಧದ ಗೆಲುವು ನಿಮಗೆ ತೃಪತ್ತಿ ನೀಡಿದೆಯೇ’ ಎಂಬುದಾಗಿ ಪ್ರಶ್ನಿಸಿದ ಪತ್ರಕರ್ತರಿಗೆ ಧೋನಿ ಟಾಂಗ್ ನೀಡಿದರು.
ಟಾಸ್ ಸೋತ ಭಾರತ ಏಕೆ ರನ್ಗಳಿಸಲು ಪರದಾಡಿತು ಹಾಗೂ ಪಂದ್ಯದಲ್ಲಿ ಎಲ್ಲಿ ತಪ್ಪಾಯಿತು ಎಂದೂ ವಿಶ್ಲೇಷಿಸಬೇಕೆಂದು ಧೋನಿ ಪತ್ರಕರ್ತರಿಗೆ ಸಲಹೆ ನೀಡಿದರು.
ಭಾರತ ಬಾಂಗ್ಲಾದೇಶದ ವಿರುದ್ಧ ಕೇವಲ ಒಂದು ರನ್ಗಳ ಅಂತರದಲ್ಲಿ ಜಯ ದಾಖಲಿಸಿರುವುದರಿಂದ ರನ್ ರೇಟ್ನಲ್ಲಿ ಹೆಚ್ಚು ಏರಿಳಿತವಾಗಿಲ್ಲ. ಆದ್ದರಿಂದ ಭಾರತದ ಸೆಮಿಸ್ ಹಾದಿ ಇನ್ನು ಪಕ್ಕಾ ಆಗಿಲ್ಲ. ಇದರಿಂದಾಗಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಭಾರತ ಗೆಲ್ಲಲೇ ಬೇಕಾಗಿದ ಎಂಬ ಹಿನ್ನೆಲೆಯಲ್ಲಿ ಪತ್ರಕರ್ತರು ಧೋನಿ ಅವರನ್ನು ಪ್ರಶ್ನಿಸಿದ್ದರು.