ಕರ್ನಾಟಕ

ಸಾಲ ವಾಪಾಸು ಕೇಳಿದ ಯುವಕನ ಬರ್ಬರ ಕೊಲೆ

Pinterest LinkedIn Tumblr

murderಬೆಂಗಳೂರು,ಮಾ.೨೧-ಸಾಲ ಕೊಟ್ಟ ಹಣವನ್ನು ಕೇಳಲು ಹೋದ ಯುವಕನಿಗೆ ಇಬ್ಬರು ಯುವಕರು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ದುರ್ಘಟನೆ ಕೆ.ಪಿ.ಅಗ್ರಹಾರದಲ್ಲಿ ನಡೆದಿದೆ.
ಕೆಪಿ ಅಗ್ರಹಾರದ ೯ನೇ ಕ್ರಾಸ್‌ನ ನಾಗರಾಜ(೨೧)ಕೊಲೆಯಾದ ಯುವಕನಾಗಿದ್ದಾನೆ,ನಿನ್ನೆ ಮಧ್ಯಾಹ್ನ ನಾಗರಾಜ ಸಾಲ ನೀಡಿದ್ದ ೨ ಸಾವಿರ ಹಣವನ್ನು ಕೇಳಲು ಪರಿಚಯವಿದ್ದ ಯುವಕರ ಬಳಿಗೆ ಹೋಗಿದ್ದಾನೆ.
ಸಾಲ ಕೊಟ್ಟವನ್ನು ವಾಪಾಸ್ಸು ಕೊಡುವಂತೆ ಪಟ್ಟು ಹಿಡಿದ ನಾಗರಾಜನ ಜೊತೆ ಜಗಳಕ್ಕಿಳಿದ ಇಬ್ಬರು ಆತನ ಹೊಟ್ಟೆ ಇನ್ನಿತರ ಭಾಗಗಳಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ನಾಗರಾಜ್‌ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಈ ಮೂದಲು ಕೂಡ ಸಾಲ ವಾಪಾಸ್ಸು ಕೊಡುವ ವಿಚಾರದಲ್ಲಿ ನಾಗರಾಜನ ಜೊತೆ ಕೃತ್ಯವೆಸಗಿ ಪರಾರಿಯಾಗಿರುವ ಇಬ್ಬರು ಯುವಕರು ಜಗಳ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಕೆಪಿ ಅಗ್ರಹಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment