ಬೆಂಗಳೂರು : ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಕುರಿತಾಗಿ ಸಿಬಿಐ ನಡೆಸುತ್ತಿರುವ ತನಿಖೆಯ ವರದಿ ವಿಳಂಬ ಖಂಡಿಸಿ ಬೆಂಗಳೂರಿನಲ್ಲಿ ಕೇಂದ್ರ ಸಚಿವರುಗಳ ಮನೆಗಳ ಮುಂದೆ ಡಿ.ಕೆ.ರವಿ ಪೋಷಕರು ಮತ್ತು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ಡಾಲರ್ಸ್ ಕಾಲೋನಿ ಯಲ್ಲಿರುವ ಸಂಸದ ಯಡಿಯೂರಪ್ಪ ಅವರ ನಿವಾಸ, ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿವಾಸ ಮತ್ತು ಸಚಿವ ಡಿ.ವಿ.ಸದಾನಂದ ಗೌಡ ಅವರ ನಿವಾಸದ ಎದುರು ಧರಣಿ ನಡೆಸಲಾಗುತ್ತಿದೆ. ಧರಣಿಯಲ್ಲಿ ಡಿ.ಕೆ.ರವಿ ಅವರ ತಂದೆ, ಸಹೋದರ ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದಾರೆ.
ಸಂಸದರ ನಿವಾಸಗಳ ಎದುರು ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.
-ಉದಯವಾಣಿ