ಮಂಡ್ಯ,ಮಾ.15- ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕೊಟ್ಟಿಗೆಗೆ ಬೆಂಕಿ ಬಿದ್ದು ಎರಡು ಹಸು, 4 ಕುರಿಗಳು ಬೆಂದು ಹೋದ ಘಟನೆ ಮಂಡ್ಯ ತಾಲ್ಲೂಕಿನ ಮಾದಗೌಡನಹಳ್ಳಿಯಲ್ಲಿ ನಡೆದಿದೆ. ಗೋಪಾಲ್ ಎಂಬುವರ ಮನೆಯ ಹಿಂಬಾಗದಲ್ಲಿದ್ದ ಕೊಟ್ಟಿಗೆಯಲ್ಲಿ ಅಳವಡಿಸಿದ್ದ ವಿದ್ಯುದ್ದೀಪ ಅತಿ ವೊಲ್ಟೇಜ್ನಿಂದ ಸ್ಫೋಟಗೊಂಡು ಅದರ ಕಿಡಿಗಳು ಹುಲ್ಲಿನ ಮೆದೆಗಳ ಮೇಲೆ ಇದ್ದ ಹಿನ್ನೆಲೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಮೂಕ ಪ್ರಾಣಿಗಳು ಕೊಟ್ಟಿಗೆಯಿಂದ ಹೊರ ಬರಲಾಗದೆ ಸಜೀವವಾಗಿ ದಹನಗೊಂಡಿದೆ. ಬೆಂಕಿ ವ್ಯಾಪ್ತಿ ಮನೆಗೂ ಆವರಿಸಿದ ಹಿನ್ನೆಲೆಯಲ್ಲಿ ಕೆಲ ವಸ್ತುಗಳು ಕೂಡ ಸುಟ್ಟು ಹೋಗಿವೆ. ಘಟನೆ ನಡೆದಾಗ ಮನೆಯವರ್ಯಾ್ರೂ ಇರಲಿಲ್ಲ ಎಂದು ಹೇಳಲಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.