ಕರ್ನಾಟಕ

ಹಾಯ್ ಶಿಷ್ಯ ಎಂದಿದ್ದಕ್ಕೆ ಕೊಲೆ: ಐವರು ಅರೆಸ್ಟ್

Pinterest LinkedIn Tumblr

hiಬೆಂಗಳೂರು: ಫೇಸ್‌ಬುಕ್‌ನಲ್ಲಿ ಹಾಯ್ ಶಿಷ್ಯಾ ಎಂದು ಮೆಸೇಜ್ ಮಾಡಿದ್ದಕ್ಕೆ ಯುವಕನೊಬ್ಬನನ್ನು ಅಪಹರಿಸಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಜಾಲ ಪೊಲೀಸರು ಇಂದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಜುನಾಥ್ ಅಲಿಯಾಸ್ ಮೊಲ, ಮದನ್, ಯೋಗೀಶ್, ಪ್ರದೀಪ್ ಹಾಗೂ ಭರತ್ ಎನ್ನಲಾಗಿದ್ದು, ಇನ್ನು ಮೂವರು ತಪ್ಪಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇತ್ತೀಚೆಗಷ್ಟೇ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದಲ್ಲಿ ಕೆಲಸ ಮಾಡುವ ಅರುಣ್ ಮತ್ತು ಆತನ ಸ್ನೇಹಿತ ಅಜಿತ್ ಹದಿನೈದು ದಿನಗಳ ಹಿಂದೆ ಫೇಸ್ಬುಕ್‌ನಲ್ಲಿ ಸಂದೀಪ್ ಎಂಬಾತನಿಗೆ ಹಾಯ್ ಶಿಷ್ಯಾ ಎಂದು ಮೆಸೇಜ್ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಸಂದೀಪ್ ಮೆಸೇಜ್ ಮಾಡಿದ್ದ ಅರುಣ್ ಮತ್ತು ಅಜಿತ್ ಜೊತೆ ಜಗಳ ಮಾಡಿಕೊಂಡಿದ್ದ. ಈ ಜಗಳದಲ್ಲಿ ಅರುಣ್ ಮತ್ತು ಸ್ನೇಹಿತರು ಸಂದೀಪನಿಗೆ ಹೊಡೆದಿದ್ದರು. ಈ ಹೊಡೆದಾಟದ ಬಗ್ಗೆ ತಿಳಿದಿದ್ದ ಅರುಣ್ ತಾಯಿ ಮತ್ತೆ ಗಲಾಟೆ ಆಗಬಹುದು ಎಂಬ ಕಾರಣಕ್ಕೆ ಆತನನ್ನು ಫೆ.26 ರಂದು ತಮಿಳುನಾಡಿನ ತಮ್ಮ ಸಂಬಂಧಿ ಕರ ಮನೆಗೆ ಕಳುಹಿಸಿದ್ದರು. ಆದರೆ ಫೆ.29ರಂದು ಅರುಣ್ ತಮಿಳುನಾಡಿನಿಂದ ವಾಪಸ್ ಬಂದಿದ್ದ. ಸೋಮವಾರ ರಾತ್ರಿ 8.30 ರ ಸಮಯದಲ್ಲಿ ಅರುಣ್ ಮನೆಗೆ ಬಂದ ಸಂದೀಪ್ ಮತ್ತು ಸ್ನೇಹಿತರು ಆತನನ್ನು ಮಾತನಾಡಲು ಹೊರಗೆ ಕರೆದೊಯ್ದು ಹತ್ಯೆ ಮಾಡಿದ್ದರು.

Write A Comment