ಕರ್ನಾಟಕ

ಸರ್ಕಾರದಿಂದ ಯೋಧನ ಕುಟುಂಬಕ್ಕೆ 25 ಲಕ್ಷ ರೂ ಚೆಕ್​ವಿತರಣೆ

Pinterest LinkedIn Tumblr

vijaypurವಿಜಯಪುರ: ಹುತಾತ್ಮ ಯೋಧ ಸಹದೇವ ಮೋರೆ ಕುಟುಂಬಕ್ಕೆ ಸರ್ಕಾರದ ವತಿಯಿಂದ ಇಂಡಿ ಶಾಸಕ ಯಶವಂತರಾಯ ಗೌಡರು ಭಾನುವಾರ 25 ಲಕ್ಷ ರೂ ಚೆಕ್ ವಿತರಣೆ ಮಾಡಿದರು.

ಮೃತ ಯೋಧನ ತಂದೆ ಮಾರುತಿ ಮೋರೆ ಹಾಗೂ ತಾಯಿ ರುಕ್ಮಬಾಯಿ ಅವರಿಗೆ ಶಾಸಕರು ಚೆಕ್ ವಿತರಿಸಿದರು. ಈ ಹಿಂದೆ ಮೃತ ಯೋಧನ ಕುಟುಂಬಕ್ಕೆ 25ಲಕ್ಷ ರೂ ಪರಿಹಾರ ನೀಡುವುದಾಗಿ ಸರ್ಕಾರ ಘೊಷಿಸಿತ್ತು. ಕಾಶ್ಮೀರದಲ್ಲಿ ಉಗ್ರರ ಜತೆಗೆ ನಡೆದ ಗುಂಡಿನ ಕಾಳಗದಲ್ಲಿ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಇದರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ಸಹದೇವ ಮಾರುತಿ ಮೋರೆ (25) ಸಹ ಗುಂಡಿಗೆ ಬಲಿಯಾಗಿದ್ದ ಮೃತ ದುರ್ದೈವಿ.

Write A Comment