
ಯಾದಗಿರಿ: ಯಾದಗಿರಿಯ ಸುರಪುರದ ತರಡಕಲ್ ತಾಲೂಕು ಪಂಚಾಯ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಒಂದೇ ಒಂದು ಮತದ ಅಂತರದಲ್ಲಿ ಜಯ ಗಳಿಸಿದ್ದಾರೆ.
ಬಿಜೆಪಿಯ ರೇಣುಕಾ ಎಂಬುವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕವಿತಾ ಯಗ್ಗೇರಿ ಕೇವಲ ಒಂದೇ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಕವಿತಾ ಯಗ್ಗೇರಿ 3185 ಮತಗಳನ್ನ ಪಡೆದು ಗಳಿಸಿದ್ದರೆ, ರೇಣುಕಾ 3184 ಮತಗಳನ್ನ ಪಡೆದು ಸೋಲನುಭವಿಸಿದ್ದಾರೆ.