ಕರ್ನಾಟಕ

ಬಿಗ್‍ಬಾಸ್ ಮನೆಯಲ್ಲಿ ಸುದೀಪ್‍ ನಾರದನಂತೆ ! ಹರಿಕಥೆ ಮಾಡಿದ ಆನಂದ್ ಯಾಕೆ ಈ ರೀತಿ ಹೇಳಿದ್ರು ….

Pinterest LinkedIn Tumblr

Bigboss

ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಮನೋರಂಜನೆಯ ಕೇಂದ್ರ ಬಿಂದುವಾಗಿರುವ ಮಾಸ್ಟರ್ ಆನಂದ್, ಒಂದಲ್ಲ ಒಂದು ರೀತಿ ಮನೆಯವರಿಗೆ ಮನೋರಂಜನೆ ನೀಡುತ್ತಿರುತ್ತಾರೆ. ನಿನ್ನೆ ಬಿಗ್‍ಬಾಸ್ ಮನೆಯಲ್ಲಿ ಭಾಗವತರಂತೆ ಹರಿಕಥೆ ಮಾಡಿದರು ಆನಂದ್. ಅದರಲ್ಲಿ ಸುದೀಪ್ ಅವರಿಗೆ ಸಿಕ್ಕಿದ್ದು ನಾರದನ ಪಾತ್ರ.

ಪ್ರತಿ ಶನಿವಾರ ಎಲಿಮಿನೇಟ್ ಆದವರನ್ನು ಮನೆಯಿಂದ ಹೊರಗೆ ಕರೆಸುವ ಜವಾಬ್ದಾರಿ ಸುದೀಪ್ ಅವರದ್ದು. ಇದನ್ನು ಮನೆಯವರೆಲ್ಲ ಹರಿಕಥೆಯ ರೂಪದಲ್ಲಿ ಹಾಸ್ಯಾತ್ಮಕವಾಗಿ ವಿಡಂಬಿಸಿದರು.

ಬಿಗ್ ಬಾಸ್ ಎಂಬ ಸತ್ಯಲೋಕವಿತ್ತು, ಅದರಲ್ಲಿ ಪ್ರತಿ ಶನಿವಾರ ನಾರದ ಮಹರ್ಷಿ ಬಂದು ಬಿಗ್‍ಬಾಸ್ ಪ್ರಜೆಗಳಿಗೆ ಹಾಯ್, ಹಲೋ ಎನ್ನುತ್ತಾರೆ. ಅವರು ಕಲಹ ಪ್ರಿಯರು, ಆದರೆ ಅದು ಲೋಕ ಕಲ್ಯಾಣಕ್ಕಾಗಿ ಎಂದೆಲ್ಲಾ ಮಾಸ್ಟರ್ ಆನಂದ್ ಸುದೀಪ್ ಅವರ ಬಗ್ಗೆ ಹೇಳುತ್ತಿದ್ದರೆ ಅದಕ್ಕೆ ಮನೆಯವರು “ಹಾಕಿದ ಜನಿವಾರವಾ…ಶನಿವಾರ” ಎಂದು ದನಿಗೂಡಿಸಿದರು.

ಹೀಗೆ ಸುದೀಪ್ ಪ್ರತಿ ಶನಿವಾರ ಮನೆಯವರೊಂದಿಗೆ ಮಾತನಾಡುವುದನ್ನೇ ವಿಷಯವಾಗಿಟ್ಟುಕೊಂಡು ಕಾಮಿಡಿ ಹರಿಕಥೆ ಮಾಡಿದರು ಬಿಗ್‍ಬಾಸ್ ಮನೆಯ ಸದಸ್ಯರು.

Write A Comment