ಕರ್ನಾಟಕ

ಸಿಗದ ಜಾಮೀನು; ಜೆಲಲ್ಲಿ ವೆಂಕಟ್ ರಂಪಾಟ

Pinterest LinkedIn Tumblr

venkatಬೆಂಗಳೂರು,ನ.30: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದ ಹುಚ್ಚ ವೆಂಕಟ್ ಸಿನೆಮಾ ಖ್ಯಾತಿಯ ವೆಂಕಟ್, ಕಾರಾಗೃಹದಲ್ಲಿ ತನಗೆ ಜಾಮೀನು ನೀಡಲು ಯಾರೂ ಮುಂದೆ ಬರುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲಿರುವ ವೆಂಕಟ್, ನಿನ್ನೆ ಸಂಜೆ ಕಾರಾಗೃಹದಲ್ಲಿನ ಗೋಡೆ ಮತ್ತು ಕಬ್ಬಿಣದ ಸರಳುಗಳಿಗೆ ತಲೆ ಚಚ್ಚಿಕೊಂಡು ಗಾಯ ಮಾಡಿದ್ದಾನೆ. ಇದನ್ನು ಗಮನಿಸಿದ ಜೈಲಿನ ಸಿಬ್ಬಂದಿ ಕೂಡಲೇ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆಂದು ಗೊತ್ತಾಗಿದೆ.

‘ಬಿಗ್‌ಬಾಸ್’ ರಿಯಾಲಿಟಿ ಶೋನಿಂದ ಹೊರ ಬಂದ ಬಳಿಕ ಮಾಧ್ಯಮಗಳಲ್ಲಿ ಮನಸೋ ಇಚ್ಛೆ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದ ವೆಂಕಟ್ ಇದೀಗ ಜೈಲಿನಲ್ಲಿ ರಂಪಾಟ ಮಾಡಿ ಸುದ್ದಿಯಲ್ಲಿದ್ದಾನೆ. ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದ್ದರೂ ಶ್ಯೂರಿಟಿ ದೊರೆಯದ ಹಿನ್ನೆಲೆಯಲ್ಲಿ ವೆಂಕಟ್‌ಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.

Write A Comment